Monday, July 06, 2009

ಒನ್ದು ಜಿಗ್ನಾಸೆ

ಕನಕದಾಸರ ಪದಗಳನ್ನು ಕೇಳಿದಾಗಲೆಲ್ಲಾ ನನ್ಗೆ ಅನ್ನಿಸ್ತಾ ಇರುತ್ತೆ, ಪ್ರೀತಿ ಪ್ರೇಮ ಅನ್ನೊದು , ಸನ್ಗಾತಿ ಬೇಕು ಅನ್ನೊದು ಇದೆಲ್ಲ ನಶ್ವರ ಅಲ್ಲವ.
ಇವರು ನನ್ನೊರು, ಅವರು ಪರರು ಇದೆಲ್ಲ ಯಾಕೆ ಮಾಡ್ತೇವೆ ನಾವು. ನಮ್ಮ ನಮ್ಮಲ್ಲೆ ಯಾಕೆ ಹೊಡೆದಾಡ್ತೀವೆ. ಚಿಕ್ಕನ್ದಿನಿನ್ದಾ ನಾನು ನೊಡಿದ್ದು ಇದನ್ನೆ.
ಪ್ರಪಚದ ಜನರೆಲ್ಲಾ ಇವ ನನ್ನ ಜಾತಿಯವ, ಅವ ಬೇರೆ ಜಾತಿಯವ. ನಮ್ಮ ಜಾತಿ ದೊಡ್ಡದು, ನಿಮ್ಮದು ಚಿಕ್ಕದು. ನಾನು ಹಣವನ್ತ, ನೀನು ನನಗಿನ್ತಾ ಕಮ್ಮಿ.
ಹೀಗೆ ಇನ್ನೂ ಏನೇನೂ ಕಾರಣಗಳು ನಮ್ಮನ್ನು ಬೇರೆ ಬೇರೆಯಾಗಿಯೆ ಇರಿಸಿವೆ. ಇಷ್ತೆಲ್ಲಾ ಮಾಡಿ ಕೊನೆಗೆ ನಾವು ಏನಾಗುತ್ತೇವೆ? ಅದು ನಮಗ ಯಾರಿಗು ತಿಳಿದಿಲ್ಲಾ.
ಆದರು ನಾವು ಈ ಸಣ್ಣ ಸಣ್ಣ ಕಾರಣಗಳನ್ನು ಇಟ್ಟುಕೋನ್ಡು ಜೀವಿಸ್ತೇವೆ. ಇದರಿನ್ದ ಏನು ಪ್ರಯೋಜನ.

ಮೊನ್ನೆ ಊರಿಗೆ ಹೋದಾಗ, ಎಲ್ಲಾರು ಆರಾಮಾಗಿ ಕುಳಿತು ಮಾತಾಡ್ತಾ ಇದ್ದರು. ಅದರಲ್ಲಿ ನನಗೆ ಚಿಕ್ಕ ಅಜ್ಜಿ ಆಗುವರೊಬ್ಬರು , ತಮ್ಮ ಹೆಚ್ಚುಗಾರಿಕಿಯನ್ನು ತೋರಿಸಲು ,
ನಾನು ಯವತ್ತೂ ಸನ್ಖಷ್ಟ ಚಥುರ್ತಿ ಅನ್ನ ಮರೆಯೊದೇ ಇಲ್ಲಪ್ಪ. ನಾವು ಯಾವುದೆ ಕಾರಣಕ್ಕು ಮರಿಬಾರ್ದು . ನಾನು ಸುಮ್ಮನಿರಲಾರ್ದೆ ಹೋದೆ. ಅಜ್ಜಿ, ಪೂಜೆ ಮಾಡಿದರೆ ಬರಿ ದೇವರಿಗೆ
ಗೌರವ ತೊರಿಸಿದ್ರೆ ಆಗುತ್ಯೆ. ಕಸ್ಟದಲ್ಲಿ ಇರೊರಿಗೆ ಸಹಾಯ ಮಾಡಿದ್ರು ಅದು ಪೂಜೆನೇ ತಾನೆ? ಅನ್ಥ ಕೆಳಿಬಿಟ್ಟೆ. ಅಜ್ಜಿ , ಕೆರಳಿಕೊನ್ಡಿ, ನೋಡೆ ರಾಧ ನಿನ್ನ ಮಕ್ಕಳಿಗೆ ದೇವರು ದಿನ್ಡ್ರು
ಅನ್ದ್ರೆ ಮರಿಯಾದೆನೆ ಇಲ್ಲಮ್ಮ, ಹೇಗೆ ಉದ್ದಾರವಗ್ತಾರೊ ನಾನ್ ಕಾಣೆ. ನಮ್ಮಮ್ಮ ಹಣೆಹಣೆ ಚಚ್ಕೊತಾ ಇದ್ದದನ್ನ ನಾನು ಮಾತ್ರ ನೊಡಿದೆ.

ಇದರಿನ್ದ ನನ್ಗೆ ಅರ್ಥ ಆಗದಿದ್ದಿದು ಒನ್ದೆ. ಬಡವರಿಗೆ ಸಹಾಯ ಮಾಡಿ, ಅದರಿನ್ದ ದೇವರನ್ನು ಕಾಣಿ ಅನ್ತಾ ಅನ್ದಿದ್ದು ತಪ್ಪೆ? ಹೀಗೆ ದೇವರನ್ನು ಕಾಣಲು ಆಗದೆ?

ಪಡುವಾರಹಳ್ಳಿ ಪಾನ್ಡವರು ಅನ್ನೊ ಚಿತ್ರದಲ್ಲಿ ಒನ್ದು ಹಾಡಿದೆ ’ ಕಣ್ಣು ಮುಚ್ಹಿ ಕುಳಿತರೇ ಕಾಣುವೆ ನೀ ಒಬ್ಬ ಶಿವನು ಶಿವನೇ ಕಾಣುವೆ ನೀ ಒಬ್ಬ ಶಿವನು, ಕಣ್ಣು ಬಿಟ್ಟು ನೋಡಲೂ ಕಾಣ್ವರು ನೂರಾರು ಶಿವರು ಶಿವನೇ ಕಾಣ್ವರು ನೂರಾರು ಶಿವರು’. ಎಲ್ಲಾ ಧರ್ಮಗಳು ದಾನ ಮಾಡಿರಿ ಅನ್ತ ಹೇಳುತ್ತೆ ಅನ್ತಾ ಕೇಳಿದ್ದೆವೆ. ಆದರೆ ಯೆನ್ತವರಿಗೆ ದಾನ ಮಾಡಬೇಕು. ಅದಕ್ಕು ಏಲ್ಲೊ ಕೇಳಿದ್ದ ಮಾತು ’ ಸಥ್ಪಾತ್ರರಿಗೆ ಸತ್ ಸಮಯದಲ್ಲೆ ದಾನ ಮಾಡಬೇಕು’ ಅನ್ತ. ಅದರೆ ದಾನ ಅನ್ನೊದು ನಮ್ಮ ಜೊತೆಗಿನ ಮನುಶ್ಯರಲ್ಲಿ ಇರುವ ಕೆಲಸಗೇಡಿತನಕ್ಕೆ ಸಹಾಯ ಮಾಡುವತಾಗಬರದು ಅಲ್ಲವೆ? ಅದರೆ ಭಿಕ್ಶೆ ಬೇಡುವ ಹಣ್ಣ್ಹಣ್ಣು ಮುದುಕ ಮುದುಕಿಯರನ್ನು ನೋಡಿದಾಗ, ಭಿಕ್ಶೆ ಹಾಕದಿರಲು ಸಾಧ್ಯವೆ?

ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ, ಈ ಧರಮಗಳು ಅನ್ನೊವು, ಮನುಶ್ಯ ನಿರ್ಮಿಸಿಕೊನ್ಡ ರೀತಿ ರೇಶೆಗಳು ಅನ್ತಾ. ನಾವುಗಳು ಸದ್ಮನುಶ್ಯಾರಗಿ ಬಾಳಲು, ದೆವರು ಅನ್ನೊ ಮಹಾಶಕ್ತಿನ ನಮ್ಮ ಸಣ್ಣ ಊಹೆಗೆ ತಕ್ಕನ್ತೆ , ಊಹಿಸಿಕೋನ್ಡು ಬಾಳ್ತಾ ಇದ್ದೆವೆ. ಅದರೆ ಇದೇ ತಿಳಿದ ಜನ , ಮನುಸ್ಮ್ರುತಿ ಪ್ರಕಾರವಾಗಲಿ, ಚರ್ಚ್ ಪರ ಮನುಶ್ಯರಾಗಲಿ, ಯಾವುದೆ ಧರ್ಮದ ಜನರಾಗಲಿ, ಈ ಭೂಮಿ ಮೇಲೆ ಬರಿ ಒನ್ದು ಗನ್ಡು ಒನ್ದು ಹೆಣ್ಣಿನಿನ್ದ ಜೀವ ರಾಶಿ ಸ್ರುಸ್ಟಿ ಆಯ್ತು ಅನ್ತರೆ. ಹಾಗೆನ್ದರೆ, ನಾವೆಲ್ಲಾ ಅಣ್ಣ ತಮ್ಮನ್ದಿರು ಅಲ್ಲವೆ? ನಾವು ಯಾಕೆ ನಾನು ದೊಡ್ಡವ, ನೀನು ಸಣ್ಣವ ಅನ್ತ ಜಗಳ ಆಡೊದು. ನನ್ನ ಸಣ್ಣ ಮದುಳಿಗೆ ಇದೇ ತೋರಿದ್ದು. ಸರಿಯೋ ತಪ್ಪೋ ಅದು ದೇವರಿಗೆ ಅರ್ಪಿತ.

ಕಣ್ಣು

ಆಶ್ಚರ್ಯ ಸೂಸುತ್ತದೆ ಅದು ಮಗುವಿನ ಕಣ್ಣು
ಪ್ರೀತಿ ಸೂಸುತ್ತದೆ ಅದು ನ್ನ್ನಮ್ಮನ ಕಣ್ಣು
ತ್ರುಪ್ತಿ ಸೂಸುತ್ತದೆ ಅದು ನನ್ನ ಅಪ್ಪನ ಕಣ್ಣು
ಪ್ರೇಮ ಸೂಸುತ್ತದೆ ಅನ್ದುಕೊನ್ಡಿದ್ದೆ ಪ್ರಿಯೆ ಆ ನಿನ್ನ ಕಣ್ಣಲ್ಲಿ
ಅದರೆ ನೋಡಿದ್ದೆ ಅದರಲ್ಲಿ ಬೇರೆ ಒಬ್ಬರಿಗೆ ಪ್ರೀತಿ
ಅದರೆ ಆಗ ನೀನು ನೋಡಿರಲಿಲ್ಲ ನನ್ನ ಕಣ್ಣಲ್ಲಿ ನೋವು
ಈಗೆಲ್ಲ ನೋವು ಮಾಯ,
ಬರಿಯ ಕಣ್ಣಲ್ಲ, ನನ್ನ ಸನ್ಗಾತಿಯ ಹುಡುಕುವ
ತವಕದಲ್ಲಿ ಇರುವ ಆಶಾಜ್ಯೊತಿಗಳು ಈ ನನ್ನ ಕಣ್ಣು

ಮದುವೆ-ಸನ್ಗಾತಿ

ಕನಸೊನ್ದ ಕನ್ಡನ್ತೆ ಆಯ್ತು
ಅದರಲ್ಲಿ ನಾನು ಪ್ರಿಯೆ ಮದುವಣಿಗ
ಪ್ರಿಯೆ ನೀನು ಮದುವಣಗಿತ್ತಿ
ಕೊಟ್ಟು ತೆಗೆದುಕೊಳ್ಳೊ ಮಾತಾಗಿತ್ತು
ಕೋಡೊದು ಪ್ರೀತಿ, ತೆಗೆದು ಕೊಳ್ಳೊದು ಆಪ್ಯಾಯತೆ
ಕಣ್ಣು ತೆರೆದು ನೋಡಿದೆ
ಕೊಡೋದು ಹಣ, ಪಡೆಯೋದು ಗೌರವ
ಅನ್ಯೊನ್ಯತೆ ಅನ್ನೊದು ಆಮೇಲಿನ ಅನಿವಾರ್ಯತೆ
ಎಲ್ಲರ ಗೌರವ ಉಳಿಸಲು ನಾವು ಪಡುವ ಪಾಡಿಗೆ
ಯಾರೂ ಹರಿಸರು ಕಣ್ಣೀರು, ಮದುವೆಯಾದ ಮೇಲೇ
ನನಗೆ ನೀನು, ನಿನಗೆ ನಾನು
ಒಮ್ಮೆ ಮಾತಾಡಿಯಾದರು ತಿಳಿಯಬಾರದೆ ನಾವು
ನಮಗೆ ಬೇಡ ಈ ಕೊಟ್ಟು ತೆಗೆದುಕೊಳ್ಳೊ ಮಾತು
ಇರಲಿ ನಮ್ಮಿಬ್ಬರಲ್ಲಿ ಬರಿ ಕಣ್ಣೊಟದ ಭಾಷೆ
ಒಮ್ಮತವೆ ಆಗಲಿ ನಮ್ಮ ಪರಿಣಯದ ಹಾದಿ
ಬಿಡದಿರು ಕೈಯ್ಯ ದಮ್ಮಯ್ಯ

ಕನಸು-ನಲ್ಲೆ

ಮೊನ್ನೆ ನಿನ್ನ ಕಡನ್ತೆ
ನಿನ್ನೊಡನಾಡಿದನ್ತೆ ನನಗೆ ಕನಸು
ನನಸಿನಲ್ಲಿ ನೀನು ನನ್ನಿನ್ದಾ ಬಲು ದೂರ
ಅದರೂ ಮನಸು ಒಪ್ಪದು
ನೀನಿರುವೆ ಇಲ್ಲೆ ನಲ್ಲೆ ನನ್ನ ಹ್ರುದಯದಲ್ಲೆ
ಈ ಎಲ್ಲೆ ಇರುವುದು ಎನ್ದಿನವರೆವಿಗು
ನೀನಿರುವೆ ನನ್ನಲ್ಲಿ ಅಲ್ಲಿಯವರೆವಿಗು

ಬಾಳು

ಬಾಳೊನ್ದು ಭಾವ ಗೀತೆ
ಅದು ಒನ್ದು ಸುನ್ದರ ಕವಿತೆ
ಏಳು ಬೀಳಿನ ಗಾಥೆ
ಪ್ರೀತಿ ಪ್ರೇಮವ ತುಮ್ಬಿತೆ
ಆ ೩ ದಿನಗಳಾ ಕವಿತೆ
ಸತ್ವಪೂರ್ಣವದು ಆ ಜೀವಿತ

ಬಾಳು

ಬಾಳೊನ್ದು ಭಾವ ಗೀತೆ
ಅದು ಒನ್ದು ಸುನ್ದರ ಕವಿತೆ
ಏಳು ಬೀಳಿನ ಗಾಥೆ
ಪ್ರೀತಿ ಪ್ರೇಮವ ತುಮ್ಬಿತೆ
ಆ ೩ ದಿನಗಳಾ ಕವಿತೆ
ಸತ್ವಪೂರ್ಣವದು ಆ ಜೀವಿತ

ಭಾಗ 00

ಕಥೆಯ ಹೆಸರು : ಮೂಕ ಹಕ್ಕಿಯು ಹಾಡು
ಲೇಕಖರು : ಎಮ್ ಆರ್ ಹರ್ಷವರ್ಧನ
ಬರೆದ ದಿನಾನ್ಖ : ಅಪ್ರಿಲ್ ಇನ್ದ ಜುಲೈ ಮಾಹೆ ೨೦೦೯

note : ಇದು ನನ್ನ ಊಹ ಕಥೆ. ಇದು ಯಾರ ಜೀವನದ ಮೇಲೂ ಆಧಾರಿತವಲ್ಲ. ಹಾಗೇನಾದರು ಆಗಿಇದ್ದಲ್ಲಿ ಅದು ಕಾಕತಾಳೀಯವಷ್ಟೆ.

ಪಾತ್ರಗಳು :

ರಾಮು : ಹೀರೊ ನೊ ೧
ರಾಜೇಶ : ಹೀರೊ ನೊ ೨
ಸರಸ್ವತಿ : ರಮುನ ಅಮ್ಮ
ಸದಾಶಿವ ರಾಯರು : ರಾಮುನ ಅಪ್ಪ
ಜಾನಕಿ : ರಾಜೇಶನ ಅಮ್ಮ
sweetu : ರಾಮುನ ಪ್ರಿಯ ವ್ಯಕ್ತಿ ( ರಮೇಶ )
ಚನ್ದ್ರಶೇಖರ್ - ಸದಾಶಿವರ ಸಹೋದ್ಯೊಗಿ
ಪಾರ್ವತಿ - ಚನ್ದ್ರಶೇಖರ್
ನಳಿನಿ - ಚನ್ದ್ರಶೇಖರ್,ಪಾರ್ವತಿ ಅವರುಗಳ ಒಬ್ಬಳೆ ಮಗಳು

ಭಾಗ 1

gateಅನ್ನು ತೆಗೆದು ಒಳಕ್ಕೆ ಬರುತಿದ್ದ ರಾಜೆಶನ್ನ ನೊಡಿ ಸದಾಶಿವ ರಾಯರು " ಬಾ ರಾಜೇಶ , ನಿನ್ನ ಸ್ನೇಹಿತ ಇನ್ನು ಮೇಲೆ ಅವನ ರೂಮಿನಲ್ಲಿ ಇನ್ನು ಮಲಗಿದ್ದಾನೆ....ಎಳಿಸು ಹೊಗಪ್ಪ... ನಿನ್ನಿನ್ದ ಉಷಾ ರಾಗ ಕೆಳಿನೆ ಅವನು ಎಳೊಧು.... ನಮ್ಮ ಕೂಗಿಗೆಲ್ಲ ಅವನು ಎಳೊಲ್ಲ"

ರಾಜೇಶ : ಬಿಡಿ uncle ಅವನದ್ದು ಇದೆಲ್ಲ ನಿಮಗೆ ನನಗೆ ಎಲ್ಲಾ ಹೊಸದೆನುನ್ ಅಲ್ವಲ್ಲಾ .... ನನ್ಗು ಅವನನ್ನ ನೋಡದೆ ದಿನ ಅಗೊಲ್ಲ ......

ಸದಾಶಿವ : ಸರಿನಪ್ಪ ನಿಮ್ಮ ಇಬ್ರ ಸ್ನೇಹ ಕನ್ದು ಖುಶಿ ಅಗುತ್ತೆ .... ಒಳಗಡೆ ಹೋಗು ನಿಮ್ಮ aunty ತಿನ್ಡಿ ಮಾದ್ಥಾ ಇದ್ದಳೆ ಅನ್ನಿಸುತ್ತೆ...ಅವನ್ನ ಎಳಿಸಿ ರೆಡಿ ಅಗೋಕೆ ಹೇಳು .... officeಗೆ lateಆಗ್ಥಾ ಇದೆ ಅನ್ನಿಸುತ್ತೆ .....

ರಾಜೇಶ : ಸರಿ uncle.....

ತಲೆ ಬಾಗಿಲನ್ನು ದಾಟುತಿರುವಾಗಲೆ ಸರಸ್ವತಿ " ಬಾ ರಾಜೇಶ , ಅವನು ಇನ್ನು ಮಲಗಿಧಾನೆ ಅನ್ನಿಸುತ್ತೆ....ಅವನ್ನ ಎಳಿಸು ಹೋಗು, ಅವನು ರೆಡಿ ಅಗೊದ್ರೊಳೊಗಡೆ ತಿನ್ಡಿ ರೆಡಿ ಅಗಿರುತ್ತೆ....

ರಾಜೇಶ ಸರಿ aunty ಅನ್ಥ ಹೀಳಿ , ರಾಮು ರೂಮಿನೊಳಕ್ಕೆ ಕಾಲಿಡುತ್ತಾನೆ.....

ಇತ್ತ ಇದಾವುದರ ಪರಿವೆಯೇ ಇಲ್ಲದೆ, ಮುಖದಲ್ಲಿ ಮನ್ದ್ಹಾಸ ತೋರುತ್ತಾ, ಹೊಸದೊನ್ದು ಕನಸನ್ನು ಕಾಣುತ್ತಾ ಸುಖ್ಹ ನಿದ್ರೆಯಲ್ಲಿ ರಾಮು ಇದ್ದನು...ಆದರೆ ಯಾರೊ ಅವನನ್ನು ತಳ್ಳಿದ ಹಾಗಾಗಿ ಎದ್ದು ನೊಡುತ್ತಾನೆ....ಅಲ್ಲಿ ರಾಜೇಶನಿದ್ದಾನೆ......ಎನೊ ಮಗಾ ನಾನು ಬನ್ದು ಎಳಿಸೊ ವರ್ಗೂ ನೀನು ಎಳೋದೆ ಇಲ್ಲವಲ್ಲ.....officeಗೆ late ಆಗ್ಥಾ ಇಲ್ವ ಅನ್ಥ ರಾಜೇಶ ಗೊಣ್ಗ್ಥಾ ಇದ್ದ.....

ರಾಮು ಮತ್ತು ರಾಜೇಶ ಇಬ್ರು ಚಿಕ್ಕ ಮಕ್ಕಳಾಗಿದ್ದ ಸಮಯದಿನ್ದ್ಲು ಒಳ್ಲೆ ಸ್ನೇಹಿತರು ... ಇಬ್ಬರು ಒಳ್ಳೊಳ್ಳೆ IT companyಗಳಲ್ಲಿ ಇದ್ದು ಕೈ ತುಮ್ಬ ಸಮ್ಬಳ ತರ್ತಾ ಇದ್ರು .... ಇಬ್ರು ವಿಚಾರವಾದಿಗಳು, ಪರಿಸರ ಪ್ರಿಯರು, ಸಮಾಜ ಸೇವೆಯಲ್ಲಿ ಆಸಕ್ಥಿ ಉಳ್ಳವರು ಅಗಿದ್ರು.... ಇದೆಲ್ಲ ಯಾಕೆ ಹೇಳ್ಥಾ ಇದ್ದೀನೀ ಅನ್ದ್ರೆ..ಅವರು ಬೇರೆ ಹುಡುಗರ ತರಹ ಪಾಸ್ಚಮಾತ್ಯ ಸಮ್ಸ್ಕ್ರುತಿಯನ್ನು ಕನ್ದಿದ್ರು ಭಾರತೀಯ ಸಮ್ಸ್ಕ್ರುತಿನ ಪಾಲಿಸ್ತ ಇದ್ರು........

vibrationನಲ್ಲಿ ಇರೊ ರಾಮು ಮೊಬೈಲ್ ಫೊನ್ ಸದ್ದು ಮಾಡಿತು. ’good morning priya' ಅನ್ಥ ಬನ್ದ SMS ನೋಡಿದ ರಾಜೇಶ , ರಾಮು ಪ್ರೀತಿ ಮಾಡ್ಥಾ ಇದ್ದಾನೆ ಅನ್ಥ ಅರ್ಥ ಮಾಡಿಕೊನ್ದ ರಾಜೇಶ, ಸಮಯ ಬನ್ದಾಗ ರಾಮುನೆ ಇದರ ಭ್ಹಗ್ಯೆ ಹೆಳ್ಥಾನೆ ಅನ್ಥ ನಮ್ಬಿಕೆ ಇತ್ತು ಅವನಿಗೆ..

ರಾಜೇಶ ಎಳೊ ಮಗಾ ನಿನ್ನ ಲೊವೆರ್ SMS ಕೂಡ ಬನ್ದಾಯ್ತು . ಇನ್ನಾದ್ರು ಎಳಪ್ಪ

ಮೈಮುರಿಯುತ್ತಾ ರಾಮು ’ ನಿನ್ದೊಳ್ಲೆ ಕಥೆ , ದಿನಾ ಬನ್ದು ಎಳಿಸಿ ತೊನ್ದ್ರೆ ಕೊಡ್ತೀಯ ಮಗಾ ’ ಅದರೆ ಮನಸಿನ ಒಳಗಡೆ ಸ್ನೆಹಿತನ ಮೇಲೆ ಗೌರವವೆ ಇತ್ತು. ಅದರೆ ಹುಸಿಮುನಿಸಿ ತೊರಿಸ್ಥಾ ಇದ್ದ...

ರಾಮು ೬ ಅಡಿಯ ಕಟ್ಟು ಮಸ್ಥಾದ ಹುಡುಗ. ಕರಾಟೆ, ಜ್ಯುಡೊ ಮುನ್ತಾದ ಚಟುವಟಿಕೆಗಳಲ್ಲಿ ತೊಡಿಗಿಸಿಕೊನ್ದಿದ್ದ. ರಾಜೇಶನು ಫ಼ೂಟ್ ಬಾಲ್, ವೊಲ್ಲಿ ಬಾಲ್ ಮುನ್ತಾದಾ ಆಟಗಲಲ್ಲಿ ತೊಡಗಿಕೊನ್ದಿದ್ದ.

ಇನ್ನು ತಡ ಮಾಡಿದರೆ ರಾಜೇಶ ಎನು ಮಾಡ್ಥನೊ ಅನ್ಥ ರಾಮು ಸ್ನಾನದ ಮನೆಗೆ ಹೊರಟ.

ರಾಜೇಶ - ಮಗಾ ನಾನು ಕೆಳಗೆ ಆನ್ಟಿ ಜೊತೆ ಮಾತಾದ್ಥಾ ಇರ್ತೆನೆ, ಬೇಗ ರೆಡಿ ಅಗಿ ಬಾ
ರಾಮು - ಸರಿ ಮಗ, ಗಿವ್ ಮಿ ೧೦ ಮಿನಿಟೆಸ್

ಮಹಡಿ ಇನ್ದ ಕೆಳಗೆ ಇಳಿದ ರಾಜೇಶ , ರಾಮು ಅಮ್ಮ ಸರಸ್ವತಿ ಜೊತೆ ಮಾತುಕತೆಗೆ ಇಳಿದ....

ರಾಜೇಶ - ಆನ್ಟಿ,ಏನು ತಿನ್ಡಿ ಇವತ್ತು
ಸರಸ್ವತಿ - ಪೂರಿ ಸಾಗು, ನಿನ್ಗೆ ಇವಾಗಲೆ ಕೊಡ್ಲೆನೊ, ಅಥವ ಅವನ ಜೊತೆನೆ ತಿನ್ತೀಯ.....
ರಾಜೇಶ - ಅವನು ಬರ್ಲಿ ಆನ್ಟಿ....
ಸರಸ್ವತಿ - ಸರಿನಪ್ಪ
ರಾಜೇಶ - ನಾನು ದಿನಾ ಬನ್ದು ಎಳಿಸೊವರ್ಗೂ ಇವನು ಎಳೊದೆ ಇಲ್ಲವಲ್ಲ ಆನ್ಟಿ. ನನ್ನ ಮದುವೆ ಆದ ಮೇಲೆ ಇವನ ಕಥೆ ಎನು ಆನ್ಟಿ
ಸರಸ್ವತಿ - ಎನಗುತ್ತೆ, ಅವನಿಗು ಮದುವೆ ಮಾಡಿಬಿಡೊಧು, ಆಗ ಅವನ ಹೆನ್ದತಿ ಜವಾಬ್ದಾರಿ....ನೋಡು ಮರ್ತೇ ಬಿಟ್ತೆ ......ನಿಮಮ್ಮ ಜಾನಕಿಗೆ ಹೇಳು ನಾಳೆ ೧೦ ಗನ್ಟೆಗೆ ಹೊರಡೊಣ ನಿನ್ನ ಮದುವೆ ಶೊಪ್ಪಿನ್ಗ್ಗೆ ಅನ್ತ ......... ನಿನ್ನ ಮದುವೆ ಮುಗಿದ ನನ್ತರ ಇವನಿಗು ಮದುವೆ ಮಾಡಿ ಮುಗಿಸಿದ್ರೆ, ನಮಗೂ ನೆಮ್ಮದಿ.....
ರಾಜೇಶ - ಯಾಕೆ ಆನ್ಟಿ, ಅವನಿಗೆ ಒಪ್ಪಿಗೆ ಆಗೊ ಹೆಣ್ಣು ಇನ್ನು ಸಿಕ್ಕಿಲ್ವಾ....

ಅಸ್ಟರಲ್ಲಿ ಒಳಗಡೆ ಪೇಪರ್ ಓದುತ್ತಾ ಇದ್ದ ಸದಾಶಿವ, ಇವರಿಬ್ಬರ ಮಾತುಗಳನ್ನ ಕೇಳಿಸಿಕೊನ್ದು ಹೊರ್ಗಡೆ ಬನ್ದ್ರು...

ಸದಾಶಿವ - ನಮಗು ಇವನು ಒಪ್ಪೊ ತರಹದ ಹೆಣ್ಣನ್ನ ಹುಡುಕಿ ಹುಡುಕಿ ಸಾಕಾಯ್ತು.....
ಸರಸ್ವತಿ ರಾಜೇಶನ ಕಡೆ ತಿರುಗಿ - ನೀನಾದ್ರು ಕೇಳಿ ತಿಳ್ಕೊಪ ಅವನಿಗೆ ಯಾವ ತರಹದ ಹೆಣ್ಣು ಬೇಕು ಅನ್ತ ಅಥವ ಅವನು ಯರನ್ನಾದ್ರು ಇಷ್ಪಪಟ್ಟಿದ್ದಾನ ಹೇಗೇ?

ರಾಜೇಶನಿಗೆ ಪ್ರಾಣ ಸನ್ಕಟ. ಅವನಿಗೆ ರಮು ಮೊಬೈಲ್ ಸುನ್ದರಿ ಭ್ಹಗ್ಯೆ ಗೊತ್ತಿದ್ದರೂ, ರಾಮುನೇ ಹೇಳಲಿ ಅನ್ನೊ ಭಾವನೆ....
ರಾಜೇಶ - ಬಿಡಿ ಆನ್ಟಿ, ಇದನೆಲ್ಲಾ ತಲೆಗೆ ಹಚ್ಹಿಕೊ ಬೇಡಿ.... ಆ ರೀತೀ ಏನಾದರು ಇದ್ದರೇ ಅವನೆ ನಿಮಗೆ ಹೆಲ್ತಾನೆ.... ಸಣ್ಣ ಸನ್ತೊಷದ ವಿಶಯವಿದ್ರು ಅವನು ಹೇಳೊ ಅನ್ತವನು, ಅವನೆನಾದ್ರು ಪ್ರೀತಿಸಿದ್ದರೆ ಹೇಳೇ ಹೇಳ್ತಾನೆ ಆನ್ಟಿ.

ಆಸ್ಟರಲ್ಲಿ ರಾಮು ರೆಡಿ ಆಗಿ ಕೆಳಕ್ಕೆ ದೈನಿನ್ಗ್ ಹಾಲ್ಗೆ ಬನ್ದ...ಸರಸ್ವತಿ, ಸದಾಶಿವ ಮತ್ತು ರಾಜೇಶ ಎಲ್ಲರು ಗಮ್ಭೀರವಾಗಿ ಎನನ್ನೊ ಮಾತಾಡುತಿರುವರಲ್ಲಾ ಅನ್ದು ಕೊನ್ದ.....
ಈಗ ಸುಮ್ಮನಿರೊದೆ ಒಳ್ಳೆದು ಅನ್ದುಕೊನ್ದು - ಅಮ್ಮ, ಬೇಗ ತಿನ್ದಿ ಕೊಡು, ಲೇಟ್ ಆಗ್ತಾ ಇದೆ......

ಸರಸ್ವತಿ - ಬಾರಪ್ಪ ಮಗ ರಾಯ, ಏಳೊದೇ ಲೇಟ್, ಆದರೆ ನಾನು ಲೇಟ್ ಮಾಡ್ತೀನೆ ಅನ್ನುತೀಯ.....ಚೆನ್ದಾಯ್ತು ನೆನು ಹೇಳೋದು

ಸದಾಶಿವ - ರಾಮು ನಿನ್ಗೆ ನೆನ್ನೆ ಹೇಳಿದ ವಿಚಾರದ ಮೇಲೇ ಎನು ಯೊಚನೆ ಮಾಡಿದೆಯಪ್ಪ?

ರಾಮು - ಯೊಚಿಸ್ತಾ ಇದ್ದೀನೆ ಅಣ್ಣಾ... ನನಗೆ ಇನ್ನು ಸ್ವಲ್ಪ ಟೈಮ್ ಕೊಡಿ

ರಾಜೇಶ ರಾಮು ಕಡೆ ನೊಡ್ತಾ , ಅನ್ಕಲ್ ಏನ್ ಹೇಳ್ತಾ ಇದ್ದಾರೆ ಅನ್ತಾ ಕಣ್ಣಲ್ಲೇ ಕೇಳಿದಾ.....ರಾಮು ಆಮೇಲೇ ಹೇಳ್ತೀನೀ ಅನ್ತಾ ಸನ್ನೆ ಮಾಡಿದಾ.... ರಾಜೇಶ ಸುಮ್ಮನಾದ....ಸರಿ ಇಬ್ಬರೊ ತಿನ್ಡಿ ಮುಗಿಸಿ, ಬ್ರು ಕಾಫ್ಹಿ ಕುಡಿದು , ರಾಮುನ ಹೊಸ ನಾನೊ ನಲ್ಲೇ ಓಫಿಸ್ ಗೆ ಹೊರ್ಟ್ರು.......

ರಾಜೇಶ ಮತ್ತು ರಾಮು ITPLನ ಬೇರೇ ಬೇರೇ ಕಮ್ಪನಿಗಳಲ್ಲಿ ಕೆಲಸದಲ್ಲಿ ಇದ್ದರು. ಆದರು ಜೊತೆ ಜೊತೆಯಲ್ಲಿ ಕೆಲಸಕ್ಕೆ ಹೊಗಿ ಬರುತ್ತಾಇದ್ದರು. ಇಬ್ಬರು ಪರಿಸರವಾದಿಗಳು , ಹಾಗಾಗಿ car pooling ಮಾಡ್ತಾ ಇದ್ದರು. ಇದು ಕೂಡ ಬಹುಶ ಅವರಿಬ್ಬರ ಸ್ನೇಹ ಹೆಚ್ಚಿಸಲು ಕಾರಣವಾಯ್ತು ಅನ್ನಿಸುತ್ತೆ. birds of the same feather flock together ಅನ್ನೊ ಮಾತು ಇವರಿಬ್ರ ವಿಶಯದಲ್ಲಿ ಅಕ್ಶರ ಸಹ ಸತ್ಯವಾಗಿತ್ತು.

ವೈಬ್ರಟರ್ ಮೋಡ್ ನಲ್ಲಿದ್ದ ಮೊಬೈಲ್ ಮತ್ತೆ ಸದ್ದು ಮಾಡಿತು. ರಾಜೇಶ್ ಥಟ್ಟನೆ ಫೊನ್ ಎತ್ತಿಕೊನ್ಡಾಗ ರಾಮುಗೆ ಹ್ರುದಯವೇ ಬಾಯಿಗೆ ಬನ್ದನ್ಗಾಯ್ತು . sms ಹೀಗಿತ್ತು ’did u reach office sweet heart. how did your day start '

ರಾಜೇಶ - ಪರ್ವಾಗಿಲ್ಲ ಮಗಾ ....ನಿನ್ನ ಡವ್ವು ನಿನ್ನ ಭಗ್ಯೆ ಪೂರ್ತಿ ಟ್ರಾಕ್ ಇಟ್ಟಿಧಾಳೆ. ಏಸ್ಟೊತ್ತಿಗೆ ಎಲ್ಲಿರ್ತೆಯ ಅನ್ಥಾ ಅವಳಿಗೆ ಗೊತ್ತು.
ರಾಮು - ಅದನ್ನೇ ಮಗಾ ಪ್ರೀತಿ ಅನ್ನೊದು ...ಸರಿ ಸರಿ ನಮ್ಮ ಕೊಮ್ಪನಿ ಬನ್ತು, ಇಲ್ಲೇ ಡ್ರೊಪ್ ಮಾಡು ಮಗಾ...
ರಾಜೇಶ - ಸರಿ ಕಣೊ ( ಕಣ್ಣನ್ನು ಮಿಟಿಕಿಸುತ್ತಾ) enjoy

ರಾಜೇಶ ಇಳಿದು , ತನ್ನ ಕಛೇರಿಗೆ ಹೋದ. ರಾಮು ತನ್ನ ಕಛೇರಿಯ ಕಾರ್ ಪಾರ್ಕಿನ್ಗ್ ಲಾಟ್ ನಲ್ಲಿ ಕಾರ್ ಅನ್ನು ಪಾರ್ಕ್ ಮಾಡಿ, ತನ್ನ ಕಮ್ಪ್ಯುಟ್ರ್‍ ಆನ್ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.

IT ಇನ್ಡುಸ್ತ್ರಿ ಅವರುಗಳ ಬಾಳೇ ಹಾಗೆ, ಒಮ್ಮೆ ಕಛೇರಿ ಒಳಹೊಕ್ಕರೆ ಮುಗೀತು, ಹೊರಗಿನ ಪ್ರಪನ್ಚವೆ ಮರೆತು ಹೋಗುತ್ತೆ. clients, co-workers, meeting, KT ಅದೂ ಇದೂ ಅನ್ತ ಸಮಯ ಹೋಗೋದೆ ತಿಳಿಯೊದಿಲ್ಲಾ. ಅವರ ಪ್ರಪನ್ಚ ತುಮ್ಬ ಚಿಕ್ಕದು. ಆದಿನ ಹಾಗೆಯೆ ಆಯಿತು.

ಮಧ್ಯನ್ಹ ೧ ಗನ್ಟೆಗೆ , ಮತ್ತೊನ್ದು sms ಬನ್ತು. ಮೈಸಝ್ ಹೀಗಿತ್ತು ’ಊಟ ಮಾಡಿದೆಯಾ ಚಿನ್ನು, ಸನ್ಜೆ ಸಿಗ್ತಾ ಇದ್ದಿಯಾ ತಾನೆ, ೪ ದಿನಾ ಅಯ್ತು ನಿನ್ನ ಮೀಟ್ ಮಾಡಿ. ಮಿಸ್ ಮಾಡ್ಬೆಡ ಪ್ಲೀಸ್. ರಾಮು ಅದಕ್ಕೆ ’ ಚ್ಹಿನ್ತೆ ಮಾಡ್ಬೆಡ ಚಿನ್ನ, ರಾಜೇಶನ್ನ ಮನೆಗೆ ಡ್ರೊಪ್ ಮಾಡಿ, ರಾತ್ರಿ ೯ ಗನ್ಟೆಗೆ ಅದೇ ನಮ್ಮ ರೆಗ್ಯುಲರ್ ಜಾಗದಲ್ಲೆ ಮೀಟ್ ಮಾಡೊಣ. ;) ಬೇರೇ ಏನಾದ್ರು ಪ್ಲಾನ್ ಇದೆಯಾ ’ ಅನ್ತಾ ರಿಪ್ಲೈ ಮಾಡಿದ. ನನ್ತರದ ನಿಮಿಷದಲ್ಲೇ ’ ಬೇರೇ ಏನು ಇಲ್ಲಾ, ಜುಸ್ಟ್ ನಿನ್ನ ಮೀಟ್ ಮಾಡ್ ಬೇಕು, ಮಾತಾಡ್ ಬೇಕು ಅಸ್ಟೇ ’ ಅನ್ನೊ ಮೈಸಘ್ ಬನ್ತು.
ಈ ಸಮಯದಲ್ಲೆ ರಾಜೇಶ ಕರೆ ಮಾಡಿ ಊಟಕ್ಕೆ ಹೋಗೋಣ ಬಾ ಅನ್ತ ಹೇಳಿದ. . ಸರಿ ಸ್ವೀಟುಗೆ ಆಮೇಲೆ ರಿಪ್ಲೈ ಮಾಡೊಣ ಅನ್ಥ ಯೊಚಿಸಿ, ರಾಜೇಶನ ಹತ್ತಿರಕ್ಕೆ ಹೊರ್ಟ.

ಲನ್ಚ್ ಮುಗಿಸಿ ಬನ್ದ ರಾಮು ’ಖ್ಹನ್ಡಿತಾ , ನಿನ್ನ ನೋಡೋ , ಮಾತಾಡಿಸೋ ಆಸೇ ನನ್ಗೆ ಇಲ್ಲವ. coming saturdayಗೆ ನಾವು ಭ್ಹೇಟಿ ಮಾಡಿ ೪ ವರ್ಷ್ ಆಯ್ತು. ವಾರ್ಷಿಕೊತ್ಸವದ ಗಿಫ಼್ತ್ ಏನು ಕೊಡ್ತೀಯ? ’ ಅನ್ಥ ರಿಪ್ಲೈ ಮಾಡಿದ. ’ ಒನ್ದು ಮುತ್ತು ಕೊಡ್ತೆನೆ ಬಾ ;) ’ ಅನ್ತ ರಿಪ್ಲೈ ಬನ್ತು. ’ ಕೋಡಲಿಲ್ಲ ಅನ್ದ್ರೆ ಬಿಡೋರು ಯಾರು, ಸರಿ ಈಗ ಕೆಲಸ ಮುಗಿಸಿ ಆಮೇಲೆ ನಿನ್ಗೆ ಕಾಲ್ ಮಾಡ್ತೀನಿ’ ಅನ್ತ ರಾಮು ರಿಪ್ಲೈ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.

ಸನ್ಜೆ ರಾಜೇಶ ೬ಕ್ಕೆ ಕರೆ ಮಾಡಿ ಹೋರಡೊನ್ವ ಅನ್ತ ಹೇಳಿದ. ರಾಮು ತನ್ನೆಲ್ಲಾ ಕೆಲಸವನ್ನು ಒನ್ದು ಹನ್ತಕ್ಕೆ ತನ್ದಿಟ್ಟು , ನಾಳೆ ಮಾಡಬೇಕಾದಾ ಕೆಲಸದ ಲಿಸ್ಟ್ ಮಾಡಿ , ಸಿಸ್ಟಮ್ ಅನ್ನು ಲೊಗ್ ಓಫ಼್ ಮಾಡಿ ರಾಜೇಶನಿಗೆ ಮಿಸ್ಸ್ ಕಾಲ್ ಕೋಟು ಕಛೇರಿ ಇನ್ದ ಹೊರಟನು. ರಾಜೇಶನನ್ನು ಪಿಕ್ ಉಪ್ ಮಾಡಿ ITPL ಇನ್ದಾ ಹೋರಟನು. ಸ್ವಲ್ಪ ದೂರ ಹೋರಟ ಮೇಲೇ ರಾಜೇಶ ರಾಮು ಗೆಲುವಿನಿನ್ದಾ ಇರುವುದನ್ನು ಗಮನಿಸಿದ.

ರಾಜೇಶ - ಏನ್ ಮಗಾ ಫ಼ುಲ್ಲು ಖ್ಹುಷ್ ಆಗಿದ್ಯ.... ಏನ್ ವಿಷೇಶ ನಮಗೂ ಹೇಳಪ್ಪ
ಯಾವುದೋ ಲೋಕದಲ್ಲಿ ಇದ್ದ ರಾಮು - ಅಹ್ ಹ ಏನು ಇಲ್ಲಪ್ಪ.... ಹಾಗೆ ಏನು ಇಲ್ಲಾ ಮಗಾ....ನೀನು ಸುಮ್ಮನೆ ಇರೊದಿಲ್ಲವಲ್ಲ... ನನ್ನ ಕಾಲು ಎಳಿತಾ ಇರ್ತೀಯಾ ಯಾವಾಗ್ಲು ಅನ್ಥ ಹುಸಿ ಮುನಿಸು ಮುನಿದು ಹೇಳಿದ.
ರಾಜೇಶ ಹುಸಿ ಕೋಪದಿನ್ದ - ಸರಿ ಬಿಡೊ ಕೇಳೊಲ್ಲ..... ಮದುವೆ ಮಾಡ್ಕೊನ್ಡಾಗಾ ತಾನಾಗೆ ಗೊತ್ತಗುತ್ತೆ.
ರಾಮು - ಹಹಹಹ.. ಸರಿ ಸರಿ ಆಗಲೆ ಗೊತ್ತಗುತ್ತೆ ಬಿಡಿ ( ನಕ್ಕರು ಮನಸಿನಲ್ಲಿ ರಾಜೇಶ ಹೇಳಿದ ಹಾಗೆ ಜೀವನದಲ್ಲಿ ನಡೆಯಲಿ ದೇವರೆ ಅನ್ದು ಕೊನ್ಡ) .

ರಾಮು ರಾಜೇಶನ್ನ ಮನೆಗೆ ಡ್ರಾಪ್ ಮಾಡಿ, ತನ್ನ ಮನೆಗೆ ಹೊರಟು ಮುಖ್ಹ ತೊಳೆದು, ಡ್ರೆಸ್ ಬದಲಿಸಿದ. ಶೊರ್ಟ್ cream ಕುರ್ತಾ, white cotton ಪ್ಯಾನ್ಟ್ ಧರಿಸಿದ. ಅಮ್ಮ ಕೊಟ್ಟ ಬಿಸಿ ಬಿಸಿ ದೊಸೆ ತಿನ್ದು ಹೊರಡುವಶ್ಟರಲ್ಲೇ ೩-೪ ಮಿಸ್ ಕಾಲ್ಸ್ ಬನ್ದಿತ್ತು. ಮಗ ತಿನ್ಡಿ ತಿನ್ನುವುದರಲ್ಲಿ ಮಗ್ನ, ಅದರೆ ಸರಸ್ವತಿಗೆ ಮಗನಲ್ಲಿ ನಡೆದಿದ್ದ ಬದಲಾವಣೆಯನ್ನು ಗಮನಿಸುವುದರಲ್ಲಿ ಮಗ್ನಳು.

ಭಾಗ 2

ಗುರುವಾರ ಕೂಡ ಮುಗಿದಿತ್ತು . ರಾಮು ಖುಶಿಯಲ್ಲಿಯೆ ಇದ್ದನು. ರಾಜೇಶನು ಇದನ್ನು ನೊಡಿಯೂ ಏನನ್ನು ಹೇಳದೆ ಸುಮ್ಮನಿದ್ದನು.

ಶುಕ್ರವಾರದ ದಿನ ರಾಮು ತನ್ನ ಪ್ರಿಯ ವ್ಯಕ್ತಿಯನ್ನ ಭೇಟಿ ಮಾಡುವುದರಲ್ಲಿದ್ದನು . ಕಛೇರಿಯಲ್ಲಿ ಬೇಗ ಕೆಲಸ ಮುಗಿಸಿ , ಮನೆಗೆ ಸನ್ಜೆ ೬ಕ್ಕೆ ಬನ್ದನು .
ಮಗನನ್ನು ಎನ್ದೂ ಇಸ್ಟು ಬೇಗ ಬನ್ದಿದ್ದು ನೋಡಿರದಿದ್ದ ಸರಸ್ವತಿ ಮಗನ್ನು ಕೇಳಿದರು ’ ಏನ್ ಮಗು ಇಸ್ಟ್ ಬೇಗ ಕೆಲಸದಿನ್ದ ಬನ್ದೆ. ಮೈಯಲ್ಲಿ ಹುಶಾರಿದೆ ತಾನೆ’ ಎನ್ದು ರಾಮುವಿನ ಹಣೆಯನ್ನ ಮುಟ್ಟಿ ನೋಡಿದರು. ಎಲ್ಲವು ಸರಿ ಇದ್ದಿದವು.

ರಾಮು - ಅಮ್ಮ ಇವತ್ತು ಒಬ್ರು ಸ್ನೆಹಿತರನ್ನ ಭೇಟಿ ಮಾಡೋದು ಇತ್ತು. ಅದಕ್ಕೆ ಬೇಗ ಮನೆಗೆ ಬನ್ದ್ನಮ್ಮ. ಹುಶಾರಾಗಿಧೀನಿ, ಏನು ಭಯ ಪಡಬೇಡಮ್ಮ.

ಒಬ್ಬನೇ ಮಗನನ್ನು ಕನ್ದರೆ ಸರಸ್ವತಿಗೆ ಅತಿಯಾದ ವಾತ್ಸಲ್ಯ. ಬೇರೆ ಮಕ್ಕಳು ಇಲ್ಲದ್ದರಿನ್ದ ಸರಸ್ವತಿಗೆ ರಾಮು ಒನ್ದು ಅನರ್ಘ್ಯ ರತ್ನವೇ ಅಗಿದ್ದನು.

ರೂಮಿಗೆ ಹೋಗಿ, ಸ್ನಾನ ಮುಗಿಸಿದ. ಇಮ್ಪೊರ್ಟೆಡ್ ಸ್ಚೆನ್ಟ್ POLO , ಅದನ್ನ ತನ್ನ ಮೈಗೆ ಸಿಮ್ಪಡಿಸಿಕೊನ್ಡನು. ತನ್ನ ಗುನ್ಗುರು ಕೂದಲಿಗೆ parachute ಕೊಬ್ಬರಿ ಎಣ್ಣೆಯನ್ನು ತೆಳುವಾಗಿ ಹಚ್ಚಿದನು . ತೆಳುವಾದ ಬನಿಯನ್ನು, ಅದರ ಮೆಲೆ ತೀರ ಹಗುರವಾದ ಆಕಾಶ ನೀಲಿ ಬಣ್ಣದ ಟಿ-ಶಿರ್ಟ್ ಹಾಗು ಕ್ರೀಮ್ ಬಣ್ಣದ ಕೊಟ್ಟೆನ್ ಪಾನ್ಟ್ ಧರಿಸಿದನು. ಚೆನ್ದದ ಮೈಕಟ್ಟಿತ್ತು ರಾಮುವಿಗೆ. ಹೀಗೆ ನೀಟಾದ ದಿರಿಸು ಧರಿಸಿ, ಅನ್ಗಲಕ್ಕೆ ಬನ್ದಾಗ ಮಗನನ್ನು ನೋಡಿ ಸರಸ್ವತಿ ಮುದಗೊನ್ಡಳು. ’ ಎಸ್ಟು ಚೆನ್ದ ಕಾಣ್ತಾನೆ ಮಗ, ಯಾವ ಹುಡುಗಿ ಬೇಡ ಅನ್ನೊಕೆ ಸಾಧ್ಯ ಇವನ್ನನ್ನ ’ ಎನ್ದುಕೊನ್ಡಳು.
ಹೆತ್ತವ್ರಿಗೆ ಹೆಗ್ಗಣನು ಮುದ್ದೆ, ಅದರೆ ರಾಮು ಯಾರು ನೋಡಿದರು ಸುನ್ದರನು ಎನ್ದೇ ಹೇಳುವರು.

ಸ್ವೀಟುಗೆ ಹೇಳಿದ ಹಾಗೆ CHUTNEYSಗೆ ರಾಮು ಹೊರಟನು. ಅಲ್ಲಿದ್ದ ಸಮ್ಪೂರ್ಣ ಸಮಯ ಒಳ್ಳೆಯ ಕನಸೇನೊ ಎಮ್ಬನ್ತೆ ಕಳೆದು ಹೋಗಿತ್ತು.

ಮನೆಗೆ ಮರಳಿ ಬನ್ದಾಗ ರಾತ್ರಿ ೧೨ ಕಳೆದಿತ್ತು. ಅನ್ಗಳದಲ್ಲಿ ಬೆಳಕಿದ್ದಿದ್ದನು ಕನ್ಡು ರಾಮುವಿಗೆ ಆಶ್ಚರ್ಯ. ಅಪ್ಪ ಅಮ್ಮ ಯಾವಾಗಲು ರಾತ್ರಿ ೧೦ಕ್ಕೆ ಮಲಗುವವರು, ಈ ದಿನ ಯಾಕೆ ಇನ್ದು ಇನ್ನು ಮಲಗದೆ ಕಾಯುತ್ತಲಿದ್ದಾರೆ. ಕಾರ ಪಾರ್ಕ್ ಮಾಡಿ, ಮುನ್ದಿನ ಗೇಟ್ ಬೀಗ ಹಾಕಿ, ಮೈನ್ ಡೋರ್ ಹತ್ತಿರವಿರುವ ಬೆಲ್ಲನ್ನು ಒತ್ತುವದರಲ್ಲಿದ್ದನು. ಅಶ್ಟರಲ್ಲಿ ಸದಾಶಿವ ರಾಯರು ಬಾಗಿಲನ್ನು ತೆರೆದರು.

ರಾಮು - ಹುಶಪ್ಪ, ಬೆನ್ಗಲೂರು ಟ್ರಾಫ್ಹಿಕ್ಕು ಫ಼ುಲ್ಲ್ ಸುಸ್ತ್ ಮಾಡಿಹಾಕುತ್ತೆ....ಏನಣ್ಣ ಇನ್ನು ಮಲಗಲಿಲ್ಲವ...

ಸದಾಶಿವ - ಇಲ್ಲಪ್ಪ, ನಿನಗೇ ಕಾಯ್ತಾ ಇದ್ವಿ.... ನಾಳೆ ಪ್ಲಾನ್ ಎನಿದೆ ನಿನ್ದು........

ಷು ಬಿಚ್ಚುತ್ತಾ ರಾಮು ’ ಏನಿಲ್ಲಣ್ಣ, ನಾರ್ಮಲ್ಲೆ...ರಾಜೇಶನ ಮನೆಗೆ ಹೋಗೊಣ ಅನ್ತ ಇದ್ದೆ , ಯಾಕಣ್ಣ, ಏನು ವಿಷೇಶವಿದೆ ನಾಳೆ ’

ಸದಾಶಿವ - ನಾಳೆ ಮಧ್ಯನ್ಹದ ವರೆಗೂ ಎಲ್ಲಿಗು ಹೋಗಬೆಡಪ್ಪ...ನನ್ನ ಸ್ನೆಹಿತರೊಬ್ಬರು ತಮ್ಮ ಸಮ್ಸಾರ ಸಮೇತರಾಗಿ ನಾಳೆ ತಿನ್ಡಿ ಸಮಯಕ್ಕೆ ಬರೊರಿದ್ದರೆ.. ಹಾಗಾಗಿ ಎಲ್ಲಿಯು ಹೋಗಬೇಡ

ರಾಮು - ಸರಿ ಅಣ್ಣ... ರಾಜೇಶನ ಮನೆಗೆ ಸನ್ಜೆಗೆ ಹೋಗ್ತೆನೆ.

ಸದಾಶಿವ ರಾಯರು ಎನ್ದೂ ಹೀಗೆ ಇದ್ದಕಿದ್ದ ಹಾಗೆ ಈ ರೀತಿಯ ವ್ಯವಸ್ತೆ ಮಾಡೋರಲ್ಲ... ಏನಿರಬಹುದು ಇದರ ಮರ್ಮ ಎನ್ದು ಕೊನ್ಡು ರಾಮು ತನ್ನ ರೂಮಿಗೆ ಹೋದನು.

ಇತ್ತ ಹಾಲಿನ ದೀಪ ಆರಿಸಿ ಸದಾಶಿವ, ಸರಸ್ವತಿ ತಮ್ಮ ಕೊಟಡಿಗೆ ಬನ್ದರು.

ಸರಸ್ವತಿ - ಏನೂ ಅನ್ದ್ರೆ...ನಾಳೆ ಹೆಣ್ಣಿನವರು ಬರ್ತಾ ಇದ್ದಾರೆ ಎನ್ದು ಮಗುಗೆ ಹೇಳಿದ್ರೆ ಚೆನ್ದಿತ್ತು ಅಲ್ವೆ.....ಮಗುಗೆ ನಾಳೆ ಸುಮ್ಮನೆ ಶಾಕ್ ಆಗುತ್ತೆ....

ಸದಾಶಿವ - ನಿನ್ನ ಮಗನಿಗೆ ಹೆಣ್ಣು ನೋಡೊಕೆ ಹೋಗೋಣ ಅನ್ದ್ರೆ ಏನೇನೋ ಕಾರಣ ಕೊಟ್ಟು ಮುನ್ದೂಡ್ತಾನೆ. ಅದಕ್ಕೆ ಈ ಆಟ ಹೂಡಿದೆ ಕಣೆ. ನಾಳೆ ಆ ಹುಡುಗಿನ ನೋಡಲಿ, ಮಾತಾಡಲಿ ಆಮೇಲೆ ನೋಡೊಣ. ಮೊಮ್ಮಕ್ಕಳನ್ನ ಆಡಿಸೊ ಆಸೆ ನಿನ್ಗಿಲ್ವೆನೆ.

ಸರಸ್ವತಿ - ಇದೆ ಅನ್ದ್ರೆ... ಆದರೆ ಮಗು ಶಾಕ್ ಅಗ್ತಾನಲ್ಲ ಅನ್ತ ಅಸ್ಟೆ.....

ಸದಾಶಿವ - ಪರ್ವಾಗಿಲ್ಲ ಬಿಡೆ..ನಿನ್ನ ಮಗು ಈಗ ಮಗು ಅಲ್ಲ..ದೊಡ್ಡ ಹುಡುಗ...ಇದೆಲ್ಲ ಜೀವನದಲ್ಲಿ ಒಮ್ಮೆ ಬರೊಅನ್ತಾದ್ದು...ನಾಳೆ ಕಾರ್ಯ ಮುಗಿಲಿ....ಹಾಗೆ ನಾಳೆ ಸ್ಪೆಶಲ್ ತಿನ್ಡಿ ಮಾಡು.... ಅವರು ೧೦ಕ್ಕೆ ಬರ್ತಾರೆ... ಈಗ ಮಲಗುವ... ಈ ಯಾವ ವಿಚಾರನು ಅವನಿಗೆ ಹೇಳಬೇಡ........

ಸರಸ್ವತಿ - ಸರಿ ಅನ್ದ್ರೆ... ನಾಳೆ ಬೇಗ ಏಳ್ಬೆಕು ಮತ್ತೆ....

ದೀಪ ಆರಿಸಿ ಇಬ್ಬರು ಮಲಗಿದರು.. ಇತ್ತ ರೂಮಿನಲ್ಲಿ ರಾಮು ಆಲೊಚಿಸುತ್ತ ಇದ್ದಾನೆ....ಅಪ್ಪ ದಿನಾ ಹೆಣ್ಣಿನ ವಿಚಾರಾ ಮತಡ್ತಾ ಇರ್ತಾರೆ.....ನಾಳೆ ಏನಾದ್ರು ಹೆಣ್ಣಿನವ್ರೆ ಬರ್ತಾ ಇಧಾರಾ...ಸಹೊದ್ಯೊಗಿ, ಸಮ್ಸಾರಾ ಸಮೇತ ಅನ್ದಾಗ ಅನುಮಾನ ಬರ್ತಾ ಇದೆ.... ನಾಳೆ ನೊಡಿದ್ರಾಯ್ತು ಬಿಡು ಎನ್ದುಕೊನ್ಡು, ಎನ್ ಅವರು ಬನ್ದು ನೊಡಿಕೊನ್ಡು ಹೋಗಿಬಿಟ್ರೆ ಮದುವೇನೇ ಅಗಿಹೊಗುತ್ತಾ....ನಾಳೆನೆ ನೊಡಿದರಾಯ್ತು ಅನ್ದುಕೋನ್ಡು ಸನ್ಜೆ ನನ್ತರದ ಸವಿ ಸಮಯವನ್ನು ನೆನೆಯುತ್ತ ನಿದ್ರೆಗೆ ಜಾರಿದನು...

ಭಾಗ 3

ಶನಿವಾರದ ಬೆಳಗ್ಗೆ ೬ಕ್ಕೆನೆ ಎದ್ದು ಸರಸ್ವತಿ ರೈಡಿಯೊ ಆನ್ ಮಾಡಿ ವಿಷ್ಣು ಸಹಸ್ತ್ರನಾಮ ಬರೊ ಸ್ಟೇಷನ್ನುಗೆ ಟ್ಯುನ್ ಮಾಡಿದಳು..ಸ್ನಾನ ಮಾಡಿ, ಪೂಜೆ ಮುಗಿಸಿ, ತನಗೂ ಸದಾಶಿವರಿಗೂ ಕಾಫ್ಹಿ ಮಾಡಿ ..ಹಾಲ್ ನಲ್ಲಿ ಪೇಪರ್ ಓದುತ್ತ ಇದ್ದ ಸದಾಶಿವರಿಗು ಕೊಟ್ಟಳು.....

ಸರಸ್ವತಿ - ಏನೂ ಅನ್ದ್ರೆ , ಪೇಪರ್ ಓದುತ್ತಾ ಲೇಟ್ ಮಾಡಬೇಡಿ...ಕಾಫ್ಹಿ ಕುಡಿದು ಬೇಗ ವಾಕ್ ಮುಗಿಸಿಕೊನ್ಡ್ ಬನ್ನಿ....ಹಾಗೆ ಕೊನೆ ಮನೆ ಲಕ್ಶ್ಮಿ ನಿಮಗೇನಾದ್ರು ಸಿಕ್ಕರೆ ಇವತ್ತು ನಾನು ವಾಕ್ಗೆ ಬರೊಲ್ಲ ಅನ್ತ ಹೇಳಿಬಿಡಿ.....

ಸದಾಶಿವ - ಸರಿ ಕಣೆ ಮಹರಾಯ್ತಿ .... ಮಾಡ್ತೀನಿ....ಇದೊ ಈಗ ಕಾಫಿ ಮುಗಿಸಿದೆ....ಈಗ ವಾಕ್ ಗೆ ಹೊರಟೆ....

ವಾಕ್ ಗೆ ಹೊರಟ ಗನ್ಡನನ್ನ ನೋಡ್ತಾ ಸರಸ್ವತಿ ಕಾಫಿಯನ್ನ ಕುಡಿದು ಮುಗಿಸಿ ಅಡುಗೆ ಮನೆ ಕಡೆ ಹೋರಟಳು....ಹೇಗೋ ಮಗ ವೀಕ್ ಯನ್ಡ್ ಆದದ್ದರಿನ್ದ ೯ ಗನ್ಟೆಗೆ ಮುನ್ಚೆ ಏಳೊಲ್ಲ.... ಅದಕ್ಕೆ ಇನ್ನು ೩೦ ನಿಮಿಷ ಇದೆ ಎನ್ದು ಕೊನ್ಡು ತನ್ನ ಕೆಲಸದಲ್ಲಿ ಮಗ್ನಳಾದಳು......

ಇತ್ತ ರಾಮು ತನ್ನ ಮನದ ಹೊಯ್ದಾಟದಿನ್ದ ಬೇಗನೆ ಎದ್ದು , ಹಾಸಿಗೆ ಮೇಲೇ ಹಾಗೆ ಮಲಗಿ ರೂಫ್ ನೊಡ್ತಾ ಇದ್ದ...

೯ ಗನ್ಟೆಗೆ ಸರಿಯಾಗಿ ಸರಸ್ವತಿ ರಾಮುವನ್ನು ಏಳಿಸಲು ಅವನ ರೂಮಿಗೆ ಬನ್ದು ’ ರಾಮು ಏಳು ಮಗು, ನಿಮ್ಮ ತನ್ದೆ ಸ್ನೇಹಿತರು ಬರೋ ಸಮಯ ಆಗ್ತಾ ಇದೆ, ಎದ್ದು ready ಅಗಪ್ಪ’

ರಾಮು - ಸರಿ ಅಮ್ಮ, ಎಷ್ಟು ಗನ್ಟೆಗೆ ಬರ್ತಾರಮ್ಮ ಅವರು

ಸರಸ್ವತಿ - ೧೦ ಗನ್ಟೆಗೆ ಕಣೊ, ಸೋಲಾರ್ ಇನ್ದ ಬಿಸಿಬಿಸಿ ನೀರು ಬರ್ತಾ ಇದೆ, ಎದ್ದು ಸ್ನಾನ ಮಾಡು

ರಾಮು - ಸರಿನಮ್ಮ, ಸ್ನಾನ ಮಾಡಿ ಬರ್ತೀನೆ. ಬೇರೆ ಏನಾದ್ರು ಕೆಲಸ ಇದ್ರೆ ಹೇಳು ಮಾಡ್ತೀನಿ

ಸರಸ್ವತಿ - ಏನೂ ಇಲ್ಲಪ್ಪ , ನೀನು ರೆಡಿ ಆಗಿ ಬನ್ದ್ರೆ ಅಶ್ಢ್ತು ಸಾಕು. ಬರ್ತಾರಲ್ಲ ಅವರ ಜೊತೆಯೆ ತಿನ್ಡಿ....ಇನ್ನೆನು ನಿಮ್ಮಪ್ಪ ಕೂಡ walking ಮುಗಿಸಿ ಬರ್ತಾರೆ.......

ರಾಮು - ಆಯ್ತಮ್ಮ

೧೦ ಗನ್ಟೆ ಆಗ್ತಾ ಇದ್ದ ಹಾಗೆ ರಾಮು ಹ್ರುದಯದ ಬಡಿತ ಕೂಡ ಹೆಚ್ಚಾಗ್ತಾ ಇತ್ತು. ತನ್ನ ಮನಸಿನಲ್ಲಿದ್ದ ಹೋಯ್ದಾಟವನ್ನು ಯಾರ ಮುನ್ದೆ ಕೂಡ ಹೇಳಲಾರದ ಸ್ಥಿತಿ ಅವನದು.

೧೦.೦೫ಕ್ಕೆ ಸರಿಯಾಗಿ ಸದಾಶಿವರಾಯರ ಸಹೋದ್ಯೋಗಿ ಚನ್ದ್ರಶೇಖರ್, ಅವರ ಪತ್ನಿ ಪಾರ್ವತಿ, ಮಗಳು ನಳಿನಿ, ಸದಾಶಿವರಾಯರ ಮನೆ ತಲುಪಿದರು. ಸರಸ್ವತಿ , ಪಾರ್ವತಿ ಹಾಗು ನಳಿನಿಯನ್ನು ಅವರ ಸನ್ಗಡ ಓಳಗಡೆಗೆ ಕರೆದುಕೋನ್ಡು ಹೋದರು. ಸದಾಶಿವ, ಚನ್ದ್ರಶೇಖರ್ ಹಾಗು ರಾಮು, ಮನೆಯ ಮುನ್ದೆ ಇರುವ ಲಾನ್ ನಲ್ಲಿ ಕುಳಿತರು.

ನಳಿನಿ ನೋಡಲು ಮುದ್ದಗಿದ್ದ ಹೆಣ್ಣುಮಗಳು. ಅದರೆ ರಾಮು ಯವುದೇ ತರಹದ ವಿಷೇಶವಾದ ಆಸತಿಯನ್ನು ತೊರಿಸದಿದುದನ್ನು ಸರಸ್ವತಿ ಗಮನಿಸಿದರು. ಅದರೆ ನಳಿನಿ ರಾಮುವನ್ನು ಮೆಚ್ಚಿದ್ದಳು ಎಮ್ಬುದನ್ನು ಕೂಡ ಗಮನಿಸಿದ್ದರು. ಸದಾಶಿವರು ಕೂಡ ಇದನ್ನೆ ಗಮನಿಸಿದ್ದರು. ಅದರು ಬನ್ದವರ ಮುನ್ದೆ ಏನು ಕೇಳುವುದು ಬೇಡವೆನ್ದು ಸುಮ್ಮನಾದರು. ಸರಸ್ವತಿಯವರು ರಾಮು, ನಳಿನಿಯನ್ನು ಕೆಲಸಮಯ ಮಾತಾಡಲು ಅನುವು ಮಾಡಿಕೊಟ್ಟರು. ನಳಿನಿಯೊಡನೆ ರಾಮು ಸ್ನೆಹಪರವಾಗಿಯೆ ನಡೆದುಕೊನ್ಡನು. ತನ್ನ ಮನದ ಹೋಯ್ದಾಟವನ್ನು ಯಾರೆದುರಿಗೂ ತೋರಿಸಲಿಲ್ಲ. ಆತಿಥ್ಯ ಚೆನ್ನಾಗಿಯೇ ನಡೆಯಿತು. ಮಧ್ಯಾನ್ಹದ ಹೊತ್ತಿಗೆ ಚನ್ದ್ರಶೇಖರ್ ಅವರ ಪರಿವಾರ ಹೊರಟಿತು. ರಾಮು ಹೊರೆತು ಎಲ್ಲರು ಈ ಭೇಟಿ ಇನ್ದ ಸನ್ತಸ ಗೊನ್ಡಿದ್ದರು.

ಅವರಎಲ್ಲರು ಹೋರಟ ಮೇಲೆ, ಸದಾಶಿವ ಹಾಗು ಸರಸ್ವತಿ , ಮಗನ ರೂಮಿಗೆ ಬನ್ದರು. ಕಿಟಕಿಯ ಬಳಿ ದೂರದ ಆಗಸ ನೋಡುತ್ತ ನಿನ್ತು ಇದ್ದು ರಾಮು. ಹಾಸಿಗೆ ಮೇಲೆ ಸರಸ್ವತಿ, ಪಕ್ಕದಲ್ಲೆ ಇದ್ದೆ ಖುರ್ಚಿ ಮೇಲೆ ಸದಾಶಿವ ಕುಳಿತರು. ಮೌನವನ್ನು ಮುರಿಯುತ್ತಾ

ಸದಾಶಿವ - ರಾಮು , ನಳಿನಿ ಬಗ್ಗೆ ನಿನ್ನ ಅನಿಸಿಕೆ ಏನು.

ರಾಮು - ನಳಿನಿ ಒಳ್ಳೆ ಹುಡುಗಿ ಅಣ್ಣ

ಸದಾಶಿವ - ನೋಡೋಕು ಚೆನ್ನಗಿ ಇದ್ದಾಳಾಲ್ಲವೆ

ರಾಮು - ಹೌದಣ್ಣ

ಸದಾಶಿವ - ಹಾಗದ್ರೆ ನಮ್ಮ ಒಪ್ಪಿಗೆ ಇದೆ ಈ ಸಮ್ಬನ್ದಕ್ಕೆ ಅನ್ತ ಹೇಳಲೆ?

ರಾಮು - ಅವಳಿಗೆ ನನಗಿನ್ತ ಒಳ್ಳೆ ಗನ್ಡೇ ಸಿಗುತ್ತೆ ಅಣ್ಣ. ನನಗೆ ಈಗಲೆ ಮದುವೆ ಆಗುವ ಮನಸಿಲ್ಲ

ಸದಾಶಿವ - ನೀನು ಹೇಲ್ತೀಯಪ್ಪ. ಆದರೆ ತನ್ದೆ ತಾಯಿಯರಾಗಿ ನಮಗು ಕೆಲವು ಜವಾಬ್ದಾರಿ ಇರುತ್ತದೆ ಅಲ್ಲವೆ. ಮತ್ತೆ ಸರಿಯಾದ ಸಮಯಕ್ಕೆ ಮದುವೆ ಆದರೆ ನಿನಗು ಒಳ್ಳೆಯದೆ ಅಲ್ಲವೆ.

ಸರಸ್ವತಿ - ನಿನ್ನ ವಯಸ್ಸಿನ ರಾಜೇಶನಿಗು ಸಹ ಮದುವೆ ಆಗ್ತಾ ಇದೆ ಅಲ್ಲವೆ. ನಮಗು ವಯಸಾಗ್ತಾ ಇದೆ ಅಲ್ವಪ.....

ರಾಮು - ಅಮ್ಮ, ಅಣ್ಣ , ನಾನು ಮದುವೆ ಆಗಲು ಸಿದ್ದವಾದಾಗ ನಾನೆ ಹೇಳ್ತೀನಿ

ಸದಾಶಿವ - ಈ ಮಾತನ್ನ ನೀನು ಕಳೆದ ೩-೪ ವರ್ಷಗಳಿನ್ದಾ ಹೇಳ್ತಾ ಇದ್ದಿ. ಈಗಲೇ ತುನ್ವಾ ತಡ ಅಗಿದೆ. ಇನ್ನು ನಾವು ನಿನ್ನ ಮಾತಿಗೆ ಕಾಯಲಾರೆವು.
ನಾನು ಚನ್ದ್ರಶೇಖರ್ ಅವರಿಗೆ ಹೇಳಿ ಕಳಿಸ್ತೀನಿ. ಬರೋ ತಿನ್ಗಳು ನಿನ್ನ ಮದುವೆ ಕೂಡ ಆಗಿಹೋಗಲಿ.

ರಾಮು - ಅಣ್ಣ ನನ್ನ ಬಲವನ್ತ ಮಾಡಬೇಡಿ. ದಯವಿಟ್ಟು ನನಗೆ ಇನ್ನು ಸ್ವಪ್ಲ ಸಮಯ ಕೋಡಿ.

ಸರಸ್ವತಿ - ಏನೂ ಅನ್ದ್ರೆ , ಅವನು ಇಸ್ಟು ಕೇಳ್ತಾ ಇದ್ದನಲ್ಲಾ, ಇನ್ನು ಸ್ವಲ್ಪ ದಿನ ಕಾಯೋಣ

ಸದಾಶಿವ - ಆಗೋಲ್ವೆ.. ಇವನಿಗೆ ೨-೩ ವರ್ಷ ಕೊಟ್ಟು ಕಾದಾಯ್ತು. ಇನ್ನು ಕಾಯೋಕೆ ಅಗೊಲ್ಲ.... ಈಗ ಇನ್ತ ಸಮ್ಬನ್ಧ ಬಿಟ್ಟರೆ ಮತ್ತೆ ಸಿಗುತ್ತೆ ಅನ್ನೊ ನಮ್ಬಿಕೆ ನನಗೆ ಇಲ್ಲ.
ನಮ್ಮ ರಾಮು ಹೀಗೆ ಎನ್ದೂ ಇರಲಿಲ್ಲ. ತನ್ದೆ ತಾಯಿ ಹೇಳಿದ ಮಾತನ್ನು ಎನ್ದೂ ತಿರಸ್ಕರಿಸುತ್ತಿರಲಿಲ್ಲ....ಈಗ ಅವನಿಗೆ ತನ್ದೆ ತಾಯಿ ಮಾತು ರುಚಿಸುತ್ತಿಲ್ಲ....

ಏನೋ ನಿಸ್ಚಯಿಸಿಕೊನ್ಡನ್ತೆ ರಾಮು - ಅಣ್ಣ ನೀನು ಈ ಮದುವೆಯ ಭಗ್ಯೆ ಮುನ್ದುವರಿಯಿರಿ

ಈ ಮತನ್ನು ಕೇಳಿ ಸದಾಶಿವ ಸರಸ್ವತಿಯರು ಸನ್ತೊಷಗೊನ್ಡರು. ನೋಡಿದಯ ಹೇಗೆ ಒಪ್ಪಿಸಿದೆ ಅನ್ನೊ ಹಾಗೆ ಸರಸ್ವತಿಯನ್ನು ನೋಡಿದರು ಸದಾಶಿವ. ಇಬ್ಬರು ಕೇಳಗೆ ಇಳಿದರು.
ರಾಮು ಕೂಡ ಕೆಳಗೆ ಬನ್ದು - ಅಮ್ಮ ನಾನು ರಾಜೇಶನ ಮನೆಗೆ ಹೋಗಿ ಬರುತ್ತೆನೆ ಅನ್ದ್ದ.

ಮಗ ಹೋರಟ ಮೇಲೆ ಸರಸ್ವತಿ ಮಗನ ಮದುವೆಗೆ ಏನೇನು ಮಾಡಬೇಕು ಅನ್ನ್ವುದನು ಸಿದ್ದಮಾಡಿಕೊಳ್ಳಲು ಅನುವಾದರು. ಇತ್ತ ಸದಾಶಿವರು ಚನ್ದ್ರಶೇಖರ್ ಅವರಿಗೆ ಕರೆ ಮಾಡಿ ತಮ್ಮ ಒಪ್ಪಿಗೆ ಇರುವುದಾಗಿಯು, ಮದುವೆಯ ಭಗ್ಯೆ ಮಾತಾಡಲು ಅವರ ಮನೆಗೆ ಹೋರಟರು.

ರಾತ್ರಿ ೯ ಗನ್ಟೆಗೆ ರಾಮು ಮನೆಗೆ ಬನ್ದ. ಮುಖ ಕಳೆಗುನ್ದಿತ್ತು. ಸರಸ್ವತಿ ಗಮನಿಸಿದ್ದರು. ಬೆಳಗ್ಗೆ ನಡೆದ ವಿಷಯದಿನ್ದ ಮಗ ನೋನ್ದಿದ್ದಾನೆ ಎನ್ದುಕೊನ್ಡು ಸುಮ್ಮನಾದರು.

ಮಾರನೆ ದಿನ ಭಾನುವಾರ. ಪ್ರತಿ week end ಹಾಗೆ ಮಗನು ೯ಕ್ಕೆ ಏಳಲಿಲ್ಲ. ಸರಿ ೧೦ಕ್ಕೆ ಹೊಗಿ ಏಳಿಸಲು ಸರಸ್ವತಿ ರಾಮುವಿನ ರೂಮಿಗೆ ಹೋದರು. ಅಲ್ಲಿದ್ದ ದ್ರುಶ್ಯವನ್ನು ನೋಡಿ ಧಿಗ್ ಬ್ರಾನ್ತಿ ಗೊನ್ಡು ಗನ್ಡನನ್ನು ಚೀರಾಡಿ ಕೂಗಿಕೊನ್ಡರು. ಪತ್ನಿ ಚೀರಿದ್ದನು ಕೇಳಿದ ಸದಾಶಿವ ಕೂಡ ಓಡಿಬನ್ದರು. ಒಬ್ಬನೇ ಮಗನು ನಿಸ್ತೇಜನಾಗಿ ನೇಣಿಗೆ ಶರಣಾಗಿದ್ದನ್ನು ಕನ್ಡರು. ದಮ್ಪತಿಗಳು ಗೋಳಾಡಿದರು. ಮಗನಿಗೆ ಮದುವೆ ಮಾಡಿಕೋ ಎನ್ದಿದ್ದೆ ತಪ್ಪಯ್ತೆ ಎನ್ದು ಸನ್ಕಟ ಪಟ್ಟರು. ಈ ದಿನ ನೋಡಲು ಮಗನನ್ನು ಸಾಕಿ ಸಲಹಿದವೆ. ಹೆತ್ತವರ ಮಾತು ಇಶ್ಟು ಅಪಥ್ಯವಾಯಿತೆ. ಇನ್ನು ಈ ಮುಪ್ಪಿನಲ್ಲಿ ತಮಗೆ ಆಗುವರಾರು. ಸದಾಶಿವರಾಯರು ಆ ದುಖ್ಹದಲ್ಲಿ ರಾಜೇಶನಿಗೆ ಕರೆ ಮಾಡಿ ನಡೆದುದ್ದನ್ನು ತಿಳಿಸಿದರು. ಸುದ್ದಿಯನ್ನು ಕೇಳಿದ್ದರು ನಮ್ಬಲು ರಾಜೇಶನಿಗೆ ಸಾಧ್ಯವಗಲೇ ಇಲ್ಲ. ತತ್ಕ್ಶಣವೆ ರಾಮುವಿನ ಮನೆಗೆ ಹೋರಟ. ರಾಮುವಿನ ರೂಮಿನಲ್ಲಿ ರಾಮು ಬರೆದಿಟ್ಟ ಕೋನೆಯ ಪತ್ರ ಸಿಕ್ಕಿತು ರಾಜೇಶನಿಗೆ. ಪತ್ರದ ಒಕ್ಕಣೆ ಹೀಗಿತ್ತು

’ ಪ್ರೀತಿಯ ಅಪ್ಪ ಅಮ್ಮನಿಗೆ

ನಾನು ಈ ಮದುವೆ ಅನ್ನು ಮಾಡಿಕೋಳ್ಳಲಾರೆ. ಅದರೆ ನಿಮಗೂ ದುಖ್ಹವನ್ನು ನೀಡಲಾರೆ. ಅದರೆ ಈ ಸಮಾಜ ನಾನು ಪ್ರೀತಿಸಿದ ವ್ಯಕ್ಥಿಯನ್ನು ಮದುವೆಯಾಗಲು , ಅವರ ಜೊತೆ ಬದುಕಲು ನನಗೆ ಅವಕಾಶ ನೀಡದು. ಅದರೆ ಮದುವೆ ಆಗಿ ನೀವು ತೊರಿಸಿದ ಹೆಣ್ಣಿಗೆ ಕೂಡ ಅನ್ಯಾಯ ಮಾಡಲಾರೆ. ಇದೆಲ್ಲದಕ್ಕು ನನ್ಗೆ ಇದೆ ನನಗೆ ತೊರಿದ ಉತ್ತರ. ನಿಮ್ಮ ಒನ್ಟಿಯಾಗಿ ಬಿಟ್ಟು ಹೊಗುತ್ತಿರುವ ನಿಮ್ಮ ಅವಿಧೆಯ ಮಗ ರಾಮು. ದಯವಿಟ್ಟು ನನ್ನನು ಕ್ಶಮಿಸಿ, ನಿಮ್ಮನ್ನು ಈ ದುಖ್ಖಕ್ಕೆ ಈಡು ಮಾಡಿ ಹೋಗುತ್ತಿರುವೆ.

ಪ್ರೀತಿಯ ಗೆಳೆಯ ರಾಜೇಶ,
ನಿನ್ನ ಬಿಟ್ಟು ನನ್ಗೆ ಇನ್ಯವ ಗೆಳಯನಿಲ್ಲ. ನನ್ನ ತನ್ದೆ ತಾಯಿಯರನ್ನು ನೀನೆ ನೊಡಿಕೊ. ನನ್ನ insurence ಮತ್ತು ಇನ್ನಿತರೆ ಗಲಿನ್ದ ಹಣ ಬರುವುದು. ದಯವಿಟ್ಟು ನೀನೆ ನಿನ್ದು ಅದನ್ನು ಇವರು ಮುನ್ದೆ ಸುಖವಾಗಿ ಇರಲು ವ್ಯವಸ್ತೆ ಮಾಡಬೇಕು. ನಿನಗೂ ತಿಳಿಸದೆ ಹೋಗುತ್ತಿರುವ ನಿನ್ನ ಈ ಗೆಳೆಯನ್ನು ಕ್ಶಮಿಸು

ಇನ್ತಿ
ನಿಮ್ಮ ರಾಮು ’

ಕಾಗದ ಓದಿ ಎಲ್ಲರು ನೊನ್ದುಖೊನ್ಡರು. ಅದರೆ ಮುನ್ದಿನದನ್ನು ಆಳೊಚಿಸಿ ರಾಜೇಶ , police stationಗೆ ಕರೆ ಮಾಡಿ , ನಡೆದ ವಿಷಯವನ್ನು ತಿಳಿಸಿ, ರಾಮು ಬರೆದ ಕಾಗದವನ್ನು ತೋರಿಸಿ, ಸದಾಶಿವರು ನೆನ್ನೆ ನಡೆದ ಘಟನೆಯನ್ನು ಪೋಲಿಸರಿಗೆ ಅರುಹಿದರು. legal ಕಾರ್ಯಗಳನ್ನು ಮುಗಿಸಿದ. ಯಾರ್ಯಾರಿಗೆ ಹೇಳಿ ಕಳಿಸಬೇಕೋ ಎಲ್ಲರಿಗು ಹೇಳಿ ಕಳಿಸಿದ. ರಾಮು ಮೊಬೈಲ್ ಇನ್ದ ಅವನ ಸ್ವೀಟು ನಮ್ಬರಿಗೆ ಕರೆ ಮಾಡಲು ಪ್ರತ್ನಿಸಿದ. ಆತ್ತಲಿನ್ದ ’ ನೀವು ಕರೆ ಮಾಡಿದ ಚನ್ದಾದಾರು , ತಮ್ಮ ದೂರವಾಣಿಯನ್ನು ಆರಿಸಿದ್ದರೆ’ ಎಮ್ಬ ಸುದ್ದಿಯನ್ನು ಹೇಳಿತು. ’please call me when you see this message' ಎನ್ದು ಆ ನಮ್ಬರಿಗೆ SMS ಕಳುಹಿಸಿದ. ಇದೆಲ್ಲರ ಮದ್ಯೆ ಸರಸ್ವತಿಯ ಸನ್ಕಟ ಯಾರಿನ್ದಲು ನೋಡಲು ಆಗಲಿಲ್ಲ. ಓಬ್ಬನೆ ಮಗನನ್ನು ಕಳೆದು ಕೊನ್ಡ ತಾಯಿಯನ್ನು ಯಾರು ತಾನೆ ಸನ್ತೈಸಬಲ್ಲರು. ತಮ್ಮ ಮುದ್ದು ಮಗನ ಗಲ್ಲ ಹಿಡಿದು , ರಾಜೇಶನನ್ನು ಕರೆದು , ನೋಡೊ ರಾಮು, ರಾಜೇಶ ಬನ್ದ. ಏಳಪ್ಪ. ಸುಮ್ಮನೆ ನಮ್ಮನ್ನ ಕಾಡಿಸಬೇಡ. ನೋಡಪ್ಪ ರಾಜೇಶ ಎಸ್ಶ್ಟು ಏಲಿಸಿದರು ಏಳೊಲ್ಲ., ನೀನು ಏಳಿಸಿದರೆ ಏಲ್ತಾನೆ ಇವನು. ಇದನ್ನು ಕೇಳಿ ಅಲ್ಲಿಯವರೆವಿಗು ದುಖ್ಹವನ್ನು ಹಿಡಿದು ಕೊನ್ಡಿದ್ದ ರಾಜೇಶ ಕೂಡ ಮಗುವಿನ ಹಾಗೆ ಸರಸ್ವತಿಯ ಕಾಲಿನ ಮೇಲೆ ಬಿದ್ದು ಅಳತೊಡಗಿದ. ಅದರು ಮಾಡಲೇಬೇಕಾದ ಕಾರ್ಯಗಲನ್ನ ನೆನೆದು ಅದರೆ ಕಡೆಗೆ ಹೊರ್ಟ. ಪೋಲಿಸರು ಎಲ್ಲವನ್ನು FIR ನಲ್ಲಿ ದಾಖ್ಹಲಿಸಿಕೊನ್ಡು ಹೇಣವನ್ನು POST MORTEMಗೆ ಕಳಿಸಿಕೊಟ್ಟರು. ೨-೩ ಗನ್ಟೆಯಲ್ಲಿ ಹೆಣ ಮನೆಗೆ ಬನ್ತು. ಬೆಳಗ್ಗೆ ಇದ್ದ ಮಗ ಈಗ ಹೆಣ. ಸದಾಶಿವರು ಮರುಗಿದರು. ಪುತ್ರ ಶೋಕಮ್ ನಿರನ್ತರಮ್....

ಸನ್ಜೆಯ ವೇಳೆಗೆ ಎಲ್ಲ ಕಾರ್ಯಗಳು ಮುಗಿದವು. ಅನಿರೀಕ್ಶಿತವಾಗಿ ಎರಗಿದ ಆಘ್ಹಾತತಿನ್ದ ಇನ್ನು ಸದಾಶಿವ-ಸರಸ್ವತಿ ಹೊರಬನ್ದಿರಲಿಲ್ಲ. ಅವರನ್ನು ಒನ್ಟೀಯಾಗಿ ಬಿಡಲು ಮನಸ್ಸೊಪ್ಪದೆ ಅವರ ಮನೆಯಲ್ಲಿಯೆ ಆ ರಾತ್ರಿ ರಾಜೇಶ ಉಳಿದುಕೊನ್ಡ. ಎಲ್ಲಿ ನೋಡಿದರು ಅವನಿಗೆ ರಾಮುವಿನ ನೆನಪೆ. ಅವನಿಗೆ ಎನೆನೊ ಯೊಚನೆಗಳು. ತನ್ದೆ ತಾಯಿಗಳು ತೊರಿಸಿದ ಹೆಣ್ಣು ಒಪ್ಪಿಗೆಯಿಲ್ಲದುದಕ್ಕೆ ಆತ್ಮ ಹತ್ಯ ಮಾಡಿಕೋಲ್ಲುವನೆ. ಇಲ್ಲ. ಸ್ವೀಟಿಯನ್ನು ಕೂಡ ಬಿಟ್ಟನೆ. ಪ್ರೀತಿಸಿದ ತನ್ದೆ ತಾಯಿ, ಸ್ವೀಟಿ, ತಾನು, ಹೀಗೆ ಎಲ್ಲರನ್ನ್ನು ಏಕೆ ನೋಯಿಸಿದ ರಾಮು. ಅದರೆ ಕಾಗದದಲ್ಲಿ ಏಕೇ ಹಾಗೆ ಬರೆದ. ತಾನು ಪ್ರೀತಿಸಿದ ವ್ಯಕ್ತಿ ಜೊತೆ ತಾನು ಇರಲು ಈ ಸಮಾಜ ಬಿಡದು ಎನ್ದು. ಖನ್ಡಿತ ರಾಮು ಒಲ್ಲೆ ನಿರ್ಧಾರ ತಗೆದು ಕೊಳ್ಳಲಿಲ್ಲ. ನೋಡೊಣ ಹೇಗಿದ್ದರೂ ಸ್ವೀಟುಗೆ SMS ಮಾಡಿದ್ದೇನೆ. ಅವರ ಜೊತೆ ಮಾತಾಡಿದ ಮೇಲೆ ಎಲ್ಲ ಗೊತ್ತಗುವುದು. ಏನೇನೊ ಪ್ರಶ್ನೆಗಳು ಅವನನ್ನು ರಾತ್ರಿಯೆಲ್ಲ ಕಾಡಿದವು.

ಆ ರಾತ್ರಿ ಕಳೆದು ಬೆಳಗಾಗುವುದು ದೊಡ್ಡ ಯುಗವೆ ಕಳೆದನ್ತೆ ಅಗಿತ್ತು ಎಲ್ಲರಿಗು. ಅದರೆ ಜೀವನ ಯಾರಿಗು ಎಲ್ಲಿಯು ನಿಲ್ಲುವುದಲ್ಲ.

ಬದುಕು ಜಟಕಾ ಬನ್ಡಿ, ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ ಹೊಗೆನ್ದ ಕಡೆಗೆ ಹೋಗು

ದಿನವೆಲ್ಲ ಸರಸ್ವತಿಗೆ ಮಗನಿಗೆ ತಾನು ತಿನ್ಡಿ ಕೊಟ್ಟನ್ತೆ, ಅವನು ತಿನ್ದದನ್ತೆ ಭಾಸವಾಗುತ್ತಿತ್ತು. ಸದಾಶಿವರು ದುಖ್ಹಗೊನ್ದಿದ್ದರು, ತಮನ್ನು ತಾವು ಸನ್ತೈಸ್ಕುಕೊನ್ಡಿದ್ದರು. ಅದರೆ ಸರಸ್ವತಿಯವರ ಹೆನ್ಗರಳು ಇದ್ದೊಬ್ಬ ಮಗನು ಈಗಿಲ್ಲ ಎಮ್ಬುದನ್ನು ಅರಗಿಸಿಕೊಳ್ಳಲು ಸಿದ್ದವಿರಲಿಲ್ಲ. ಇದೆಲ್ಲವನ್ನು ಕನ್ಡು ರಾಜೇಶನು ಮನಸಿನ್ನಲಿಯೆ ಕಣ್ಣೀರಿಟ್ಟನು.

ಭಾಗ 4

೩ ದಿನಗಳ ನನ್ತರ ರಾಮುವಿನ ಮೊಬೈಲ್ ಬುಜ಼್ಜ಼್ ಗುಟ್ಟಿತು. ’ಚಿನ್ನ, ಮನೆಗೆ ತ್ವರೆಇನ್ದ ಹೋಗಬೇಕಾಯಿತು, ಹಾಗಾಗಿ ನಿನಗೆ ಹೇಳಲು ಆಗಲಿಲ್ಲ. ಅಲ್ಲಿ ಮಳೆಬನ್ದು ಕರ್ರೆನ್ಟ್ ಇಲ್ಲದೆ, ಮೊಬೈಲ್ ಚಾರ್ಜ್ ಮಾಡಲು ಆಗಲಿಲ್ಲ. ಎನ್ದಿನನ್ತೆ ನಮ್ಮಕೊಮ್ಮನ್ ಪ್ಲೇಸ್ಗೆ ಬಾ, ೬ ಗನ್ಟೆಗೆ ಮರಿಬೇಡ ಬ್ಯುಗಲ್ ಪಾರ್ಕ್’ ಎನ್ದು sweetu ಇನ್ದ ಮೆಸೇಜ್ ಬನ್ತು. ರಾಜೇಶ ಅದನ್ನು ಓದಿ, ಸನ್ಜೆ sweetu ಅನ್ನು ಭೇಟಿ ಮಾಡಿದರೆ, ರಾಮು ಹೀಗೇಕೆ ಮಾಡಿಕೊನ್ಡ ಎಮ್ಬುದು ಗೊತ್ತಾದರು ಗೊತ್ತಗಭುದು ಎನ್ದುಕೊನ್ಡ. ದಿನವೆಲ್ಲ ಕೆಲಸದಲ್ಲಿ ಮುಳುಗಿದರು, ರಾಮು ಅವನ ಮನಸಿನಿನ್ದ ಹೊಗಿರಲಿಲ್ಲ.. ಅವನ ಅಗಲಿಕೆ ನೊವನ್ನುನ್ಟು ಮಾಡಿತ್ತು... ಸಹಜವೇ ಸದಾ ಸನಿಹದಲ್ಲಿರುವ ವ್ಯಕ್ತಿ, ಇದ್ದಕಿದ್ದನ್ತೆ ಮಾಯವದರೆ, ಯಾರು ತಾನೆ ಸಹಿಸಬಲ್ಲರು. ರಾಜೇಶನ ಮನಸ್ಸು ರಾಮು ಸತ್ತಿದಕ್ಕೆ ನೋವು, ಅವನ ತನ್ದೆ ತಾಯಿರಿಗೆ ಇಳಿವಯಸ್ಸಿನಲ್ಲಿ ಒನ್ಟಿಯಾಗಿ ಬಿಟ್ಟು ಹೋಗಿದ್ದಕ್ಕೆ ಕೋಪ, ಹೀಗೆ ಗೊನ್ದಲಗಳ ಗೂಡಾಗಿದ್ದಿತು. ರಾಮು ೬ ಗನ್ಟೆಗೆ ಹೀಗೆ ಕಾಯುತ್ತಿದನೊ ಇಲ್ಲವೊ, ರಾಜೇಶ ಮಾತ್ರ ನಿಮಿಶವೊನ್ದೊನ್ದು ಯುಗವೆಮ್ಬನ್ತೆ ಕಳೆದ.

ಸನ್ಝೆ ೫ ಆಗುತ್ತಿದ್ದನ್ತೆ , ರಾಜೇಶ ತನ್ನ ಕೆಲಸಗಳನ್ನು ಬಿಟ್ಟು, sweetuಅನ್ನು ಕಾಣಲು ಬ್ಯುಗಲ್ ರಾಕ್ ಪಾರ್ಕ್ ಕಡೆಗೆ ಹೋರಟನು. ಸನ್ಜೆಯ ಟ್ರಾಫಿಕ್ ನಡುವೆ ಬ್ಯುಗಲ್ ಪಾರ್ಕ್ ಸೇರುವ ಹೊತ್ತಿಗೆ ೫.೫೫ ಅಗುತ್ತಲಿತ್ತು. ಬ್ಯುಗಲ್ ರೊಕ್ ಪಾರ್ಕ್ ನ ತಣ್ಣಗಿನ ಹವಾಮಾನ ಕೂಡ ರಾಜೇಶನ ನೋವಿನ ಬಿಸಿಯನ್ನು ಕಡಿಮೆಮಾಡಲು ಆಗಲಿಲ್ಲ. ಅತುರ ಆತುರವಾಗಿ ಬನ್ದರು, ಬ್ಯುಗಲ್ ಪಾರ್ಕ್ನ್ ನಲ್ಲಿ ಎಲ್ಲಿ ಎನ್ದು ರಾಜೇಶನಿಗೆ ಗೊತ್ತಿರಲಿಲ್ಲ. ’ ಕಲ್ಲು ಮನ್ಟಪಕ್ಕೆ ಬಾ ’ ಎನ್ದು sweetu ವಿಗೆ ಮೆಸೇಜ್ ಮಾಡಿ, ತಾನು ಕಲ್ಲು ಮನ್ಟಪದ ತಮ್ಪಗಿನ ಕಲ್ಲಿನ ಮೇಲೆ ಕುಳಿತರು, ಬಿಸಿ ಕೇನ್ದದ ಮೇಲೆ ಕುಳಿತನ್ತೆ sweetu ವಿಗೆ ಕಾಯುತ್ತಲಿದ್ದನು. ಸನ್ಜೆ ೬ ಕ್ಕೆ, ಬ್ಯುಗಲ್ ರಾಕಿನಲ್ಲಿ ಕದ್ದು ಮುಚ್ಚಿ ಪ್ರೇಮದ ಹೆಸರಿನಲ್ಲಿ ಕಾಮವನ್ನು ಮಾಡುವರು , ಅಲ್ಲಲ್ಲಿ ಬನ್ಡೆಗಳ ಮರೆಯಲ್ಲಿ ಮರೆಯಾಗುತ್ತಲಿದ್ದರು. ಪೋಲಿಸರು ಇದನ್ನು ಕನ್ಡು ಕಾಣದವರನ್ತೆ ತಮ್ಮ ಮಾಮೂಲಿ ವಿಚಾರದಲ್ಲಿ ತಲೆ ಬಿಸಿಮಾಡಿಸಿಕೋನ್ಡು , ಮೂಲೆಯಲ್ಲಿರುವ ಟಿ ಶೊಪ್ ನಲ್ಲಿ ಟೀ ಕುಡಿಯುತ್ತಲಿದ್ದರು. ಕಲ್ಲು ಮನ್ಟಪದ ಹತ್ತಿರ ರಾಜೇಶನನ್ನು ಹೋರೆತು ಪಡಿಸಿ ನಿರ್ಜನವಾಗಿತ್ತು. ಅದರೆ ಅಸ್ಟರಲ್ಲೆ ಒಬ್ಬರು ಅದೇ ದಾರಿಯಲ್ಲಿ ಬನ್ದು ಮನ್ಟಪದ ಮೆಟ್ಟುಲುಗಳ ಮೇಲೆ ಹತ್ತುತ್ತಾ ರಾಜೇಶನು ಇರುವುದನ್ನು ಕನ್ಡರು. ನೋಡಲು ಸುನ್ದರವಾಗಿ ಇದ್ದರು ಆ ವ್ಯಕ್ತಿ. ಇಬ್ಬರು ಇವನೇಕಪ್ಪ ಇಲ್ಲೆಯೆ ಇದ್ದನೆ ಎನ್ದುಕೋಳ್ಳುತ್ತಾ ಇದ್ದರು. ಅಸ್ಟರಲ್ಲಿ ರಾಜೇಶನು, ಇನ್ನು ಏಕೆ sweetu ಬರಲಿಲ್ಲವಲ್ಲ ಎನ್ದು ಒನ್ದು ಕರೆ ಮಾಡಿಯೆಬಿಡೊಣವೆನ್ದುಖೊನ್ಡನು. ಅಸ್ಟರಲ್ಲಿ ಆ ಮೊಬೈಲ್ ಗೆ ಒನ್ದು ಕರೆ ಬನ್ತು. ಅದು sweetu ವಿನ ಕರೆ. ಮೊಬೈಲ್ ಎತ್ತಿ ಇನ್ನೆನು ರಾಜೇಶನು ಉತ್ತರಿಸಬೇಕು, ಅತ್ತಲಿನ್ದ ಒನ್ದು ಗನ್ಡಸಿನ ದ್ವನಿ ’ ಏನಿದು ಚಿನ್ನ, ನಾನು ಇಲ್ಲೆ ಕಾಯ್ತಾಇಧೀನಿ’. ಆ ಕ್ಶಣ ಕಲ್ಲು ಮನ್ಟಪ , ಅಲ್ಲಿದ್ದ ಅವರಿಬ್ಬರು, ಕಲ್ಲೇ ಆಗಿಹೋದರು.

ರಾಜೇಶನು sweetuವನ್ನು ಹೆಣ್ಣ ಎನ್ದು ಭಾವಿಸಿದ್ದನು.ಹಾಗಲ್ಲವೆನ್ದು ತಿಳಿದು ಘಾಬರಿಯಾದನು. sweetu ಅಲಿಯಾಸ್ ರಮೇಶನು, ರಾಮುವಿನ ಮೊಬೈಲ್ ಬೇರೆಯವರ ಕೈಯಲ್ಲಿ, ಅದನ್ನು ನೋಡಿಯೆ ಘಾಬರಿಗೊನ್ಡನು. ಇಬ್ಬರು ಕ್ಶಣಕಾಲ ಮೌನವಾದರು.
ಆದರೆ ರಮೇಶನೇ ಧೈರ್ಯ ತನ್ದುಕೊನ್ದೂ
ರಮೇಶ - ಈ ಮೊಬೈಲ್ ನನ್ನಗೆ ತಿಳಿದವರದು, ನಿಮ್ಮ ಬಳಿ ಹೇಗೆ
ರಾಜೇಶ ಇನ್ನು ತನ್ನ ಆಘಾತದಿನ್ದ ಹೊರಗೆ ಬರುತ್ತಾ - ’ ಇದು ನನ್ನ ಸ್ನೆಹಿತರೊಬ್ಬರದು, ಅವರು ಅವರ ಇನ್ನೊಬ್ಬ ಸ್ನೆಹಿತನನ್ನು ಭೇಟಿ ಮಾಡಿ ಬರಲು ನನ್ನನು ಕಳುಹಿಸಿದ್ದರೆ. sweetu ಅವರ ಹೆಸರು ಎನ್ದಸ್ಟೇ ನನಗೆ ಗೊತ್ತು.
ರಮೇಶ ಈ ಮಾತುಗಳನ್ನು ಕೇಳಿ, ಅದಕ್ಕೆ ಉತ್ತರಿಸಬೇಕೋ ಬೇಡವೋ ಅಮ್ಬ ಜಿಗ್ನಾಸೆಗೆ ಒಳಗಾದನು. ಎದುರುಗಿರುವ ವ್ಯಕ್ತಿ ಅವನ ರಾಮುವಿನ ಮಿತ್ರನೆ, ಶತ್ರುವೆ? ಅದರು ಧೈರ್ಯ ತನ್ದುಕೊನ್ಡು
ರಮೇಶ - ಅಹುದು, ನಾನೆ sweetu, ರಾಮು ನನ್ನನ್ನೆ ಇಲ್ಲಿ ಭೇಟಿ ಮಾಡಲು ಬರುವನಿದ್ದನು. ಅವನು ಬರದೆ ನೀವು ಬರಲು ಕಾರಣ
ರಾಜೇಶ - ನಾನು ರಾಮುವಿನ ಸ್ನೇಹಿತ ರಾಜೇಶ. ಅನಿರೀಕ್ಶಿತ ಕಾರಣಗಲಿನ್ದ ಅವನು ಬರಲು ಆಗಲಿಲ್ಲ.
ರಮೇಶ - ಆಹ್ ನೀವು ರಾಜೇಶ ಅವರೆ. ನಿಮ್ಮ ಭಗ್ಗೆ ರಾಮು ಹಲವಾರು ಸಲ ಹೇಳಿದ್ದನೆ. ನೀವು ಅವನ ಪ್ರಾಣ ಮಿತ್ರರು ಎನ್ದು.
ರಾಜೇಶ - ನಾನು ನಿಮ್ಮನ್ನು ಭಾನುವಾರ ಭೇಟಿ ಮಾಡಲು ಕರೆ ಮಾಡಿದೆ, ಆದರೆ ನಿಮ್ಮ ಮೊಬೈಲ್ ಸ್ವಿಚ್ ಒಫ಼್ ಆಗಿತ್ತು.
ರಮೇಶ - ಅಹುದು, ನಾನು ಊರಿಗೆ ಹೊಗಿದ್ದೆ, ಹಾಗಾಗಿ ಸಿಗಲು ಆಗಲಿಲ್ಲ. ಮನ್ಗಳೂರಿನ ಮಳೆಗಾಲ ನಿಮಗೆ ತಿಳಿದಿದೆ ಅಲ್ಲವೆ. ಮಳೆ, ಗಾಳಿ, ಹಾಗು ಕರೆನ್ಟ್ ಇರೊದಿಲ್ಲ.
ರಾಜೇಶ - ಅದೆಲ್ಲ ಸರಿ, ರಾಮುವಿನ ಬದಲು, ನೀವು ಏಕೆ ಕರೆಮಾಡಿದ್ದಿರಿ
ಈ ಪ್ರಶ್ಣೆಗೆ ಉತ್ತರಿಸಲು, ರಾಜೇಶನು, ಒತ್ತಿ ಬರುತ್ತಿರುವ ದು:ಖ ವನ್ನು ತಡೆದು ಕೊನ್ಡು - ಮೊನ್ನೆ ಭಾನುವಾರ, ರಾಮು ನಮ್ಮನು ಎಲ್ಲರನ್ನು ಬಿಟ್ಟು ದೇವರನ್ನು ಸೇರಿದನು.
ರಮೇಶನಿಗೆ ಇದನ್ನು ಕೇಳಿ ನಮ್ಬಲು ಆಗಲಿಲ್ಲ. ರಾಮು ಏನದರು ಈ ರೀತಿ ಹೇಳರು ರಾಜೇಶನಿಗೆ ಹೇಳಿದನೆ. ಅಥವ ಎದುರುಗಿರುವ ವ್ಯಕ್ತಿ ರಾಜೇಶನೆ ಅಲ್ಲವೆ.
ರಮೇಶ - ನಿಮ್ಮ ಮಾತನ್ನು ನಮ್ಬಲು ಆಗುತ್ತಿಲ್ಲ. ರಾಮು ಇಲ್ಲ . ಅದರೆ ನಿಮ್ಮನು ರಾಜೇಶ್ ಎನ್ದು ಹೇಗೆ ನಮ್ಬುವುದು.
ರಾಜೇಶ - ಇದು ನನ್ನ DL. ಈಗಲಾದರು ನೀವು ನಮ್ಬಬುಹುದು.
ರಮೇಶನಿಗೆ ಇದೆಲ್ಲವು ನಿಜವೊ ಸುಳ್ಳೊ ಕನಸೋ ನನಸೊ ತಿಳಿಯದೆ ಭ್ರಾನ್ತಿಗೊಳಗಾದನು. ತನ್ನ ಪ್ರೆಮಿಯು ಇನ್ನಿಲ್ಲವೆ? ತಾನು ಇನ್ನು ಒನ್ಟಿಯೆ? ಓ ದೇವರೆ ಎನ್ತಾ ಕೆಲಸ ಮಾಡಿಬಿಟ್ಟೆ
ರಾಮುವು ಮನಸಿನಲ್ಲಿ ಏನಿತ್ತು, ಏಕೆ ಹೀಗೆ ಮಾಡಿಕೊನ್ಡನೆದು ನೆನೆದು ಅತ್ತನು.

ರಾಜೇಶ - ನಿಮಗೆ ಈ ಸುದ್ದಿ ಹೇಳಲು ಇಲ್ಲಿಗೆ ಕರೆದಿದ್ದೆ. ಅವನು ಪ್ರೀತಿಸಿದ್ದ ನಿಮ್ಮನ್ನು ಎನ್ದು ತಿಳಿದಿತ್ತು. ಆದರೆ ನೀವು ಗನ್ಡಸರೆನ್ದು ಮಾತ್ರ ತಿಳಿದಿರಲಿಲ್ಲ. ಅವನು ಇದಕ್ಕಾಗಿ ಸತ್ತನೆನ್ದು ಈಗ ತಿಳಿಯಿತು. ಅದರೆ ನನಗೆ ಇದನ್ನು ಇನ್ನು ನಮ್ಬಲಾಗುತಿಲ್ಲ.
ನಾನು ಅವನನ್ನು ಗಮನಿಸಿರುವ ಮಟ್ಟಿಗೆ, ಅವನಿಗೆ ಹೆಚ್ಚು ಸ್ನೆಹಿತರು ಇರಲಿಲ್ಲ. ಅದರೆ ಅವನು ಎಲ್ಲಿಯು ಗನ್ಡಸರ ಓಡನೆ ಹೆಚ್ಚು ಸಲಿಗೆ ಬೇಳೆಸುತ್ತರಿಲ್ಲಿಲ್ಲ. ಅದರೆ ಹೀಗೆ
ರಮೇಶ - gay ಅಥವ ಸಲಿನ್ಗ ಕಾಮಿಗಳು ಎನ್ದರೆ, ಬರಿ ಕಾಮವೆ ಇರುವುದಿಲ್ಲ. ಅಲ್ಲಿ ಪ್ರೆಮವು ಉನ್ಟು. ಪ್ರೀತಿ ಎಮ್ಬುದು ಇಬ್ಬರು ವ್ಯಕ್ತಿಗಳ ನಡುವಿನ ಬನ್ಢ. ಅದರೆ ಎಲ್ಲರು ಅರ್ಥ ಮಾಡಿಕೊಳ್ಳಲಾರರು. ರಾಮುವಿಗೆ ಮನೆಯಲ್ಲಿ ಮದುವೆ ಮಾಡಬೇಕ್ನ್ದು ಕೊನ್ಡಿರುವುದು ನನಗೆ ಗೊತ್ತಿತ್ತು. ಅದರೆ ೪ ವರ್ಷದಿನ್ದ ನಮ್ಮ ಪ್ರೇಮ ನಡೆದಿತ್ತು. ನಿಮಗು ತಿಳಿದಿದೆ.
ರಾಜೇಶ - ನಾನು ಇನ್ನು ಹೊರಡುತ್ತೆನೆ.
ರಮೇಶ - ನಿಮ್ಮಿನ್ದ ಬಹಳ ಉಪಕಾರವಾಯ್ತು. ನೀವಿರದಿದ್ದರೆ, ಅವನು ನಮ್ಮನ್ನು ಬಿಟ್ಟು ಹೊಗಿದ್ದರ ವಿಶಯವೆ ನನಗೆ ತಿಳಿಯುತ್ತಿರಲಿಲ್ಲ. ನಿಮಗೆ ಸದಾ ನಾನು ಚಿರರುಣಿ
ಅಸ್ಟರಲ್ಲಿ ರಾಜೇಶನು ಅಲ್ಲಿನ್ದ ಹೊರಟುಹೊಗಿದ್ದನು. ಪಡುವಣದಲ್ಲಿ ಸೂರ್ಯನು ಮುಳುಗಿದ್ದನು. ರಮೇಶನು ಅನ್ಧಕಾರದಲ್ಲಿ , ಆ ಕಲ್ಲಿನ ಮನ್ಟಪದಲ್ಲಿ ಕರಗಿಹೋದನು


ಇತ್ತ ಮನೆಗೆ ಬನ್ದ ರಾಜೇಶನು, ಈ ಸನ್ಜೆ ನಡೆದ ಘಟನೆಗಳು ನಮ್ಬಲಸಾಧ್ಯ ಆಗಿದ್ದವು. ಊಟ ಎಮ್ಬುದು ಶಾಸ್ತ್ರಕ್ಕೆ ಆಯ್ತು. ತನ್ನ ರೂಮ್ ಯವಾಗ ಸೆರುತ್ತೆನೊ ಎನ್ದು ರಾಜೇಶನು ಕಾದಿದ್ದನು. ಅವನ ಮನಸಿನಲ್ಲಿ ಬರೀ ಪ್ರಶ್ನೆಗಳು. ಉತ್ತರ ಹುಡುಕು ತಲ್ಲಣ.
ಸಲಿನ್ಗ ಕಾಮವು, ಬೇರೇ ಕಾಮಕ್ಕೆ ಸಮನೆ, ಅದು ತಪ್ಪೆ? ಪ್ರೇಮವು ದೊಡ್ಡದು ಎನ್ದು ಹೇಳುತ್ತರೆ, ಹಾಗಿದ್ದರೆ ಸಲಿನ್ಗ ಪ್ರೇಮವು ತಪ್ಪೆ? ಒಬ್ಬ ಯುವಕ, ತನ್ನ ಬಾಳ ಸನ್ಗಾತಿಯಾಗಿ ಇನ್ನೊಬ್ಬ ಯುವಕನನ್ನು ಸ್ವೀಕರಿಸುವುದು ತಪ್ಪೆ? ಅವರಿಗೆ ಬಾಳಲು ಹಕ್ಕು ಇಲ್ಲವೆ? ಇದರಿನ್ದ ಸಮಾಜದ ಮೇಲೇ ಪರಿಣಾಮವೇನು? ಇದು ರೋಗವೆ? ಇದು ಇರವುದು ಸಹಜವೆ? ರಾಮು ಇದಕ್ಕೆ ಸತ್ತನೆ? ತಾನು ಹೇಗೆ ಎನ್ದು ಹೇಳಿದ್ದರೆ ನಾನು ಸಹಿಸುತ್ತಿದ್ದನೆ? ಒಪ್ಪುತ್ತಿದ್ದನೆ? ಅವನ ಸನ್ಗಡ ಮೊದಲಿನ ಹಾಗೆ ಇರುತ್ತಿದ್ದನೆ? ಅದರೆ ಸಾವೆ ಇದಕೆಲ್ಲ ಪರಿಹಾರವೆ? ಈ ವಿಚಾರವನ್ನು ಮನೆಯವರಿಗೆ ಹೇಳಿದ್ದರೆ ಅವರು ಒಪ್ಪುತ್ತಿದ್ದರೆ? ಅವನು ಹೇಣ್ಣೋನ್ದನ್ನು ಮದುವೆ ಯಾಗಿ ಇದೆಲ್ಲದರಿನ್ದ ದೂರ ಇರಬಹುದಿತ್ತೆ? ಮದುವೆ ಯವುಗುವುದು ಸರಿಯೆ? ಹೆಣ್ಣೊನ್ದರ ಜೀವನವನ್ನು ಈ ವಿಚರದಲ್ಲಿ ಪಣಕಿದುವುದು ಸರಿ ಇರುತ್ತಿತ್ತೆ? ರಾಮುವನ್ನು ಎಸ್ಟೊನ್ದು ಜನರು ಪ್ರೀತಿಸುತ್ತಾ ಇದ್ದರು. ಅವನ ತನ್ದೆ ತಾಯಿ , ನಾನು, sweetu. ನಮ್ಮೇಲ್ಲರನ್ನು ನಡುವೆ ಬಿಟ್ಟು ಹೊಗಿದ್ದು ಸರಿಯೆ? ಅದರೆ ಅವನ ಸಾವೆ ಇದೆಕೆಲ್ಲಾ ಪರಿಹಾರವೆ? ಇನ್ನು ಅವನ ತನ್ದೆ ತಾಯಿ ಹೇಗೆ ಜೀವಿಸುತ್ತರೆ? ಹೆತ್ತ ತನ್ದೆ ತಾಯಿಯರ ಮೇಲೆನ ಜವಾಬ್ದಾರಿ ಅವನನ್ನು ಸಾವಿನ ದಾರಿ ತುಳಿಯದನ್ತೆ ತಡೆಲಾರದೆ ಹೊಯ್ತೆ... ರಾಮು ಎನ್ದೂ ಯರನ್ನೊ ಹೆಚ್ಚು ಗಮನಿಸಿದ್ದನ್ನು ನಾನು ನೋಡಲು ಇಲ್ಲ. ನನ್ಗೆ ಗೊತ್ತಿದ್ದರೆ, ಅವನನ್ನು ಸಾಯಲು ಬಿಡುತ್ತಿರಲಿಲ್ಲ. ಯಾರೊಡನೆಯು ಅಸ್ಭ್ಯ ವರ್ತನೆ ಮಾಡಿದ್ದನೆದು ಕೇಳಿರಲಿಲ್ಲ... ೪ ವರ್ಷ ಒಬ್ಬರನ್ನೇ ಪ್ರೀತಿಸುವು ಸುಲಭ್ಹವೇನಲ್ಲ. ನಾವು ಇಲ್ಲಿಯವರ್ಗು ಸಲಿನ್ಗ ಪ್ರೀಮಿಗಳ ಬಗ್ಗೆ ಕೇಳಿರಲೇ ಇಲ್ಲ, ಕೇಳಿದೆಲ್ಲವು ಸಲಿನ್ಗ ಕಾಮಿಗಳ ಭಗ್ಯೆ. ಪ್ರೇಮಿಸಿದ್ದು ರಾಮುವಿನ ತಪ್ಪೆ? ರಮೇಶನ್ನು ಪ್ರೆಮಿಸಿದ್ದು ತಪ್ಪೆ? ಪ್ರೆಮವು ಕುರುಡು ಎನ್ದು ಕೇಳಿದ್ದೆ, ಪ್ರೇಮವನ್ನು ಹುಟ್ಟಿಸಲು ಸಾಧ್ಯವಿಲ್ಲ ಎನ್ದು ಕೇಳಿದ್ದೆ. ಹಾಗಿದ್ದರೆ ರಾಮು ಮಾಡಿದ್ದು ತಪ್ಪೆ? ಸಾವಿನ್ದ ಯಾರಿಗೆ ಸಹಾಯವಾಯ್ತು, ಅದದ್ದು ರಾಮುವಿಗೆ ಮಾತ್ರವೆ? ಅವನ್ನನು ನಮ್ಬಿದ ಮಿಕ್ಕವರೆಲ್ಲರು ನೊವಿನಲ್ಲಿ ಇರಬೇಕಾಯ್ಥೆ... ರಾಮುಗೆ ಹೀಗೆ ಸಾವಿಗೆ ಶರಣಾಗಬಾರದಿತ್ತು. ಅದರೆ ಬದುಕಿದ್ದಿದ್ದರೆ ಇದಕ್ಕೆ ಇನ್ನವ ತರಹದ ಉತ್ತರ ಸಿಗುತ್ತಿತ್ತೊ? ಏಸ್ಟೋ ಪ್ರಶ್ನೆಗಳು, ಉತ್ತರಿಸಲು ರಾಮುವಿರಲಿಲ್ಲ. ಉತ್ತರ ಸಿಗದೆ ರಾಜೇಶನು ತಳಮಳದಿ ಮಗ್ಗಲು ಬದಲಿಸಿದನು. ಕಿಟಕಿಯ ಹೋರಗಡೆ ಚನ್ದ್ರ ಮಾತ್ರ ಎನ್ದಿನನ್ತೆ ಬೆಳ್ಳಿಯ ಬೆಳಕನ್ನು ಚೆಲ್ಲುತ್ತಲಿದ್ದನು

ಕಾಲವು ಯಾರನ್ನು ಕಾಯುತ್ತ ನಿಲ್ಲದು, ಅದು ನಿರನ್ತರವಾಗಿ ಸಾಗುತ್ತಲೆ ಇರುತ್ತದೆ.. ನಿರನ್ತರ


ಶುಭಮ್

Thursday, July 02, 2009

preethiyida ninage

ನನ್ನ ಗೆಳತಿ
ಹಾಲ್ಗ್ಗೆನೆಯ ಚೆಲುವೆ, ಚಂದದ ನಗುವಿನ ಒಡತಿ
ಗುಂಗುರು ಕೂದಲಿನ ಪ್ರಣತಿ ನನ್ನ ಗೆಳತಿ
ಮಗುವಿನ ಮನಸು ಸಾವಿರ ಕನಸು ಆ ಹೊಳೆವ ಕಣ್ಣಿನಲಿ
ಎಲ್ಲ ಕಲಿಯುವ ಆಸೆ ಆಕೆಯಲಿ
ಧರೆಗಿಳಿದ ಅಪ್ಸರೆ ನನ್ನ ಗೆಳತಿ
ಒಮ್ಮೆ ಜ್ವಾಲಾಮುಖಿ ಒಮ್ಮೆ ಶಾಂತ ಕೊಳ
ಒಮ್ಮೆ ಹಠಮಾರಿ ಒಮ್ಮೆ ನಗುವಿನ ಸೆಲೆ
ನನ್ನ ತಿದ್ದಿ ಸರಿಪಡಿಸುವ ಮಾಯಗಾತಿ ನನ್ನ ಗೆಳತಿ
ಹೇಗೆ ಹೇಳಲಿ ನಮ್ಮ ಬಂಧವನ್ನು,
ಅವಳು ಮುದ ಕೊಡುವ ಸಂಧ್ಯಾ, ನಾನು ಕರಗುವ ಶಶಿ
ಅವಳು ಬಾರದೆ ನಾನಿಲ್ಲ ಅವಳಿಲದೆ ಬದುಕಿನಲ್ಲಿ ಗೆಲುವಿಲ್ಲ


Note: nanage idara mele nambike illa.... aadare shashi baredidhale antha hakidhene
and as usual, idhara ella hakku shashikala hatrane ide, please check with her if u need to post anywhere